ಕೊಪ್ಪಳ : ಸಿಎಂ ಡಿ.ಕೆ. ಶಿವಕುಮಾರ್ ಭೂದೇಶ್ವರ ದೇವಸ್ಥಾನಕ್ಕೆ ಅಚ್ಚರಿಯ ಭೇಟಿ ನೀಡಿ, ಆಶೀರ್ವಾದ ಪಡೆದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಭೂದೇಶ್ವರ ದೇವಸ್ಥಾನಕ್ಕೆ ದಿಢೀರ್ ಭೇಟಿ ನೀಡಿದರು.
ನಾಳೆ ದೇವಸ್ಥಾನದಲ್ಲಿ ಚಂಡಿಕಾ ಯಾಗ ಹೋಮ ನಡೆಯಲಿದೆ. ಸಿಎಂ ತಮ್ಮ ಭೇಟಿಯ ವೇಳೆ ಹೋಮಕ್ಕೆ ಸಂಕಲ್ಪ ಪೂಜೆ ನೆರವೇರಿಸಿ, ಉತ್ತಮ ಮಳೆ, ಸಮೃದ್ಧ ಫಸಲು, ರಾಜ್ಯದ ಜನತೆಗೆ ಒಳಿತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಭಾಗದ ಹಿರಿಯ ರಾಜಕೀಯ ನಾಯಕ, 95 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ಎಚ್.ಆರ್. ರಾಮುಲು ಅವರನ್ನು ಭೇಟಿಯಾದರು. ಸಿಎಂ ರಾಮುಲು ಅವರ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು. ಭೇಟಿ ಸಂದರ್ಭದಲ್ಲೇ ಮಾತನಾಡುತ್ತಾ, ಸಿಎಂ ಡಿ.ಕೆ. ಶಿವಕುಮಾರ್ ಎಚ್.ಆರ್. ರಾಮುಲು ಅವರೊಂದಿಗೆ 1982ರಿಂದಲೂ ಆತ್ಮೀಯ ಒಡನಾಟವಿದೆ. ರಾಮುಲು ಅವರು ವಿದ್ಯಾರ್ಥಿ ನಾಯಕರಾಗಿದ್ದ ಆರಂಭದ ದಿನಗಳಲ್ಲಿ ಜಾಫರ್ ಷರೀಫ್, ಎಸ್. ಬಂಗಾರಪ್ಪ, ರಾಜಗೋಪಾಲ್, ಹನುಮಂತಪ್ಪ ಅವರಂತಹ ನಾಯಕರೊಂದಿಗೆ ಬೆಂಬಲ ನೀಡಿ ಆಶೀರ್ವಾದ ಮಾಡಿದ್ದರು ಎಂದು ಸ್ಮರಿಸಿದರು.
ಆ ಹಿರಿಯ ನಾಯಕರಲ್ಲಿ ಹೆಚ್ಚಿನವರು ಈಗ ಬದುಕಿಲ್ಲ. ಈಗ ಉಳಿದಿರುವ ಕೆಲವೇ ಕೆಲವು ಹಿರಿಯ ನಾಯಕರಲ್ಲಿ ಎಚ್.ಆರ್. ರಾಮುಲು ಒಬ್ಬರು ಎಂದು ಮುಖ್ಯಮಂತ್ರಿ ಹೇಳಿದರು.
ಸುಮಾರು 40 ವರ್ಷಗಳ ಹಿಂದೆ ರಾಮುಲು ಅವರು ಮುಂದೊಂದು ದಿನ ಸಿಎಂ ಆಗ್ತಾನೆ ಎಂದು ಹೇಳಿದ್ದರು ಎಂದು ಸ್ಮರಿಸಿದ ಅವರು, ಇದು ಸುದೀರ್ಘ ರಾಜಕೀಯ ಇತಿಹಾಸದ ಭಾಗವಾಗಿದೆ ಎಂದು ಬಣ್ಣಿಸಿದರು.
ರಾಮುಲು ಅವರ ಆಶೀರ್ವಾದ ಪಡೆಯಲು ನಾನು ವಿಶೇಷವಾಗಿ ಬಂದಿದ್ದೇನೆ ಎಂದು ಹೇಳಿದ ಸಿಎಂ ಶಿವಕುಮಾರ್, ಅವರು ನನಗೆ ತಂದೆಯಂತೆ ಎಂದು ಬಣ್ಣಿಸಿದರು.
ಭೂದೇಶ್ವರ ದೇವಸ್ಥಾನವನ್ನು ರಾಮುಲು ನಿರ್ಮಿಸಿದ್ದು, ಹಲವು ವರ್ಷಗಳ ಹಿಂದೆಯೇ ರಾಮುಲು ದೇವಸ್ಥಾನಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. ಆದರೆ ಇಲ್ಲಿಯವರೆಗೆ ಬರಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
PublicNext
06/09/2026 11:33 am
LOADING...