ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜನರ ಸಮಸ್ಯೆ ಕೇಳಿದ ಸಚಿವ ಲಾಡ್, ಅಧಿಕಾರಿಗಳಿಗೆ ಫುಲ್ ಕ್ಲಾಸ್

ಕುಂದಗೋಳ: ಜೆಎಸ್‌ಎಸ್ ಕಾಲೇಜಿನಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ’ ಜನಸಂಪರ್ಕ ಸಭೆಯಲ್ಲಿ ಸಚಿವ ಸಂತೋಷ ಲಾಡ್ 147ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ಸೂಚಿಸಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

​ರೈತರ ಜಮೀನಿನ ದಾರಿಗೆ ಜೆಸಿಬಿ ಬಳಕೆಗೆ ಸೂಚಿಸಿದ ಅವರು, ಪಶುಪತಿಹಾಳ ಕೆರೆ ಕಾಮಗಾರಿ ಹಾಗೂ ಘನತ್ಯಾಜ್ಯ ಘಟಕ ದುರಸ್ತಿಗೆ ಇಒಗೆ ತಾಕೀತು ಮಾಡಿದರು. ಸ್ಥಗಿತಗೊಂಡ 2,900 ಮಾಸಾಶನ ಅರ್ಜಿಗಳನ್ನು 2 ದಿನದಲ್ಲಿ ವಿಲೇವಾರಿಗೆ ಉಪತಹಶೀಲ್ದಾರ್‌ಗೆ ತರಾಟೆಗೆ ತೆಗೆದುಕೊಂಡರು.

​ಕಮಡೊಳ್ಳಿಯ ಅನಾಥ ಅಂಗವಿಕಲ ಯುವಕನಿಗೆ ವೈಯಕ್ತಿಕ ನೆರವು ನೀಡುವುದಾಗಿ ಅಭಯ ನೀಡಿದ ಸಚಿವರು, ಸೈನಿಕ ಕುಟುಂಬದ ಯುವತಿಯ ಉದ್ಯೋಗ ಸಮಸ್ಯೆಗೆ ತಕ್ಷಣವೇ ಚಿಕ್ಕೋಡಿ ಅಧಿಕಾರಿಗೆ ಕರೆ ಮಾಡಿ ಪರಿಹರಿಸಿದರು.

​ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ರೈತರನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ಯುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಶಾಸಕ ಎಂ.ಆರ್. ಪಾಟೀಲ, ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೇರಿದಂತೆ ಹಲವರು ಭಾಗವಹಿಸಿದ್ದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/09/2026 08:29 am

Cinque Terre

11.57 K

Cinque Terre

0

ಸಂಬಂಧಿತ ಸುದ್ದಿ