", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/378325-1750075750-21.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಾಗಲಕೋಟೆ: ತೇರದಾಳ ಪಟ್ಟಣದ ರಾಘವೇಂದ್ರ ಮಠದ ನೂತನ ಕಟ್ಟಡ ಹಾಗೂ ಮುಖ್ಯಪ್ರಾಣದೇವರ ಮತ್ತು ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಪ್ರತಿಷ್ಠ...Read more" } ", "keywords": "Bagalkot Rayara Madyaprana Devar pratishtapane, Sri Subudhendra Tirtha performs ritual, deity installation ceremony.", "url": "https://dashboard.publicnext.com/node" } ಬಾಗಲಕೋಟೆ: ರಾಯರ ಮುಖ್ಯಪ್ರಾಣದೇವರ ಪ್ರತಿಷ್ಠಾಪನೆ ನೆರವೇರಿಸಿದ ಶ್ರೀ ಸುಬುಧೇಂದ್ರ ತೀರ್ಥರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ರಾಯರ ಮುಖ್ಯಪ್ರಾಣದೇವರ ಪ್ರತಿಷ್ಠಾಪನೆ ನೆರವೇರಿಸಿದ ಶ್ರೀ ಸುಬುಧೇಂದ್ರ ತೀರ್ಥರು

ಬಾಗಲಕೋಟೆ: ತೇರದಾಳ ಪಟ್ಟಣದ ರಾಘವೇಂದ್ರ ಮಠದ ನೂತನ ಕಟ್ಟಡ ಹಾಗೂ ಮುಖ್ಯಪ್ರಾಣದೇವರ ಮತ್ತು ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಪುರಪ್ರವೇಶ ಮಾಡಿದ ಮಂತ್ರಾಲಯದ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀ ಪಾದರನ್ನು ಶುಕ್ರವಾರ ಸ್ಥಳೀಯ ದತ್ತಮಂದಿರದ ಮುಂಭಾಗ ಸದ್ಭಕ್ತರು ಮಾಲಾರ್ಪಣೆ ಮಾಡಿ, ಸ್ವಾಗತಿಸಿದರು.

ತದನಂತರ ರಾಘವೇಂದ್ರಸ್ವಾಮಿ ಮಠದವರೆಗೆ ನಡೆದ ಶೋಭಾಯಾತ್ರೆಯಲ್ಲಿ ಮುತ್ತೈದೆಯರು ಪೂರ್ಣಕುಂಭದೊಂದಿಗೆ ಭಾಗಿಯಾದರು. ಅನೇಕ ವಾದ್ಯಮೇಳಗಳು ಮೆರವಣಿಗೆಗೆ ಕಳೆ ತುಂಬಿದವು.

ಶ್ರೀಮಠದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಸುಬುಧೇಂದ್ರತೀರ್ಥ ಶ್ರೀ ಪಾದರ ಸಾನಿಧ್ಯದಲ್ಲಿ ಪ್ರತಿಷ್ಠಾಂಗ ಕಲಶಸ್ಥಾಪನೆ, ಪ್ರತಿಮೆಗಳಿಗೆ ಕಲಶಾಭಿಷೇಕ, ಷೋಡಶೋಪಚಾರ ಪೂಜೆ, ಮೂಲಮೃತ್ತಿಕಾ ಸ್ಥಾಪನೆ, ಶಾಲಾಗ್ರಾಮ ಸ್ಥಾಪನೆ, ಅಷ್ಟಮಹಾಮಂತ್ರಗಳ ಸಹಿತ ಲಕ್ಷ್ಮೀ ಮುಖ್ಯಪ್ರಾಣದೇವರ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರಗಳು ಹಾಗೂ ಮಹಾಪಂಚಾಮೃತಾಭಿಷೇಕ ಮಂಗಳಾರತಿ ಹಾಗೂ ಪ್ರಮುಖವಾಗಿ ಮುದ್ರಾಧಾರಣೆ, ಸಾಮೂಹಿಕ ಪಾದಪೂಜೆಗಳು ನೆರವೇರಿದವು.

ತದನಂತರ ಶ್ರೀಗುರುರಾಜ ಅನುಗ್ರಹಕ್ಕಾಗಿ ಸರ್ವ ಭಕ್ತಾದಿಗಳಿಗೆ ದರ್ಶನವನ್ನು ನೀಡಿದರು.

ಶ್ರೀಮಠದಲ್ಲಿ ಬೆಳಿಗ್ಗೆಯಿಂದಲೇ ವಿಧಿವಿಧಾನಪೂರಕ ಪೂಜಾದಿಗಳು ಹಾಗೂ ಮಹಿಳೆಯರಿಂದ ಭಜನಾ ಸೇವೆ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು.

ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ ವಿಪ್ರ ಸಮಾಜದ ಹಿರಿಯರು, ಮಹಿಳೆಯರು, ಮಕ್ಕಳ ಸಹಿತ ಹಲವು ಸದ್ಭಕ್ತರು ಭಾಗಿಯಾಗಿದ್ದರು.

Edited By : Somashekar
Kshetra Samachara

Kshetra Samachara

16/06/2025 05:39 pm

Cinque Terre

25.96 K

Cinque Terre

0