", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/38659820250624074735filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "KumarTumakur" }, "editor": { "@type": "Person", "name": "9844461373" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತುಮಕೂರು: ದಕ್ಷ, ಪ್ರಮಾಣಿಕ, ರೈತರ ಪರ ಧ್ವನಿ ಎತ್ತಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುತ್ತಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡರ ಕಾರ್ಯವೈಖರಿಗೆ ...Read more" } ", "keywords": ""Revenue Minister review meeting, Karnataka government, Krishna Byre Gowda, land grant scheme, Podi restoration, land records digitalization, Tahsildar meeting, revenue department, land grant case disposal, Karnataka news, land revenue minister, Krishna Byre Gowda warning officials, Karnataka land revenue" ", "url": "https://dashboard.publicnext.com/node" }
ತುಮಕೂರು: ದಕ್ಷ, ಪ್ರಮಾಣಿಕ, ರೈತರ ಪರ ಧ್ವನಿ ಎತ್ತಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುತ್ತಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡರ ಕಾರ್ಯವೈಖರಿಗೆ ಇಲ್ಲಯವರೆಗೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು, ಆದರೆ ತುಮಕೂರಿನ ನಗರ ಕೇಂದ್ರ ಗ್ರಂಥಾಲಯ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಚಾಟಿ ಬೀಸದೆ ಗಿಳಿ ಪಾಠ ಮಾಡಿದ್ದು, ದಕ್ಷ ಕಂದಾಯ ಸಚಿವ ಕೃಷ್ಣ ಭೈರೇಗೌಡ ಇವರೇನಾ. ಎಂಬ ಅನುಮಾನ ಹುಟ್ಟು ಹಾಕಿದೆ.
ಗೃಹಸಚಿವ ಡಾ. ಜಿ. ಪರಮೇಶ್ವರ್ ತವರು ಕ್ಷೇತ್ರ ತುಮಕೂರು ನಗರದಲ್ಲಿ ಕಂದಾಯ ಸಚಿವರು ಸೋಮವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯಾವ ಅಧಿಕಾರಿಗಳಿಗೂ ಚುರುಕು ಮುಟ್ಟಿಸಲಿಲ್ಲ, ಅಧಿಕಾರಿಗಳು ಕಂಠಪಾಠ ಮಾಡಿಕೊಂಡು ಬಂದು ಹೇಳಿದ ಗಿಳಿಪಾಠ ಕೇಳಿ ತಲೆ ಮೇಲಿನ ಬಾರ ಪರಿಹರಿಸಿಕೊಂಡರು.
ಇಲ್ಲಿಯವರೆಗೂ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಕಡತ ಪರಿಶೀಲಿಸಿ ಅಧಿಕಾರಿಗಳಿಗೆ ತಮ್ಮದೇ ದಾಟಿಯಲ್ಲಿ ಚುರುಕುಮುಟ್ಟಿಸುತ್ತಿದ್ದ ಕಂದಾಯ ಸಚಿವರು ತುಮಕೂರಿನಲ್ಲಿ ನಡೆಸಿದ ಸಭೆ ಮಾತ್ರ ನೀರಸವಾಗಿತ್ತು, ಗೃಹಸಚಿವರ ತವರು ಕ್ಷೇತ್ರದಲ್ಲಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿದರೆ ಏನಾಗುತ್ತದೋ ಎಂಬ ಭಯದಲ್ಲಿ ಸಭೆ ಸಮಾಪ್ತಿಯಾದಂತೆ ಗೋಚರಿಸಿತು.
ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳೂ ಸಹ ಕಾಟಾಚಾರಕ್ಕೆ ಸಭೆಯಲ್ಲಿ ಆಸೀನರಾಗಿದ್ದರು, ಕೆಲವರು ಮೊಬೈಲ್ನಲ್ಲಿ ಹರಟೆಯಲ್ಲಿ ತಲ್ಲೀನರಾಗಿದ್ದರೆ, ಚಿಕ್ಕನಾಯಕನಹಳ್ಳಿ ಗೇಡ್ 2 ಶಿರಸ್ತೇದಾರ್ ಕೀರ್ತಿ, ಕುಣಿಗಲ್ ಶಿರಸ್ತೇದಾರ್ ಮೊಬೈಲ್ನಲ್ಲಿ ರೀಲ್ಸ್ ನೋಡ್ತಾ ಇದ್ದರು. ಕಂದಾಯ ಸಚಿವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಲು ದೂರದ ಊರುಗಳಿಂದ ಬಂದಿದ್ದ ರೈತರು ದೂರುದಾರರು ಕಂದಾಯ ಸಚಿವರನ್ನು ಭೇಟಿ ಮಾಡಲು ಪರಿತಪಿಸಿದರು, ಕಾಟಾಚಾರಕ್ಕೆ ಅರ್ಜಿ ಸ್ವೀಕರಿಸುವ ಶಾಸ್ತ್ರ ಮುಗಿಸಿ ಬುದ್ದಿ ಹೇಳಿದರು.
ತಮ್ಮ ಸಭೆಯಲ್ಲಿ ಅಧಿಕಾರಿಗಳು ರೀಲ್ಸ್ ನೋಡುತ್ತಿದ್ದ ಬಗ್ಗೆ ಮಾಧ್ಯಮದವರು ಸಚಿವರ ಗಮನಕ್ಕೆ ತಂದಾಗ ನಾನು ಸಾಮಾನ್ಯ ಮನುಷ್ಯ, ನಾನು ಎಲ್ಲದನ್ನೂ ನೋಡುವುದಕ್ಕೆ ಸಾಧ್ಯವಿಲ್ಲ, ಜಿಲ್ಲಾಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಹಾರಿಕೆ ಉತ್ತರ ನೀಡಿದರು.
ಇಲ್ಲಿಯವರೆಗೂ ದಕ್ಷ ಸಚಿವರು ಎಂದು ಮಾತಾಗಿದ್ದ ಕಂದಾಯ ಸಚಿವರು ತುಮಕೂರಿನಲ್ಲಿ ನಡೆಸಿದ ಸಭೆ ಪ್ರಚಾರಕ್ಕೆ ಸೀಮಿತವಾದಂತೆ ಕಂಡು ಬಂತು. ಅಲ್ಲಿಗೆ ಬಂದ ಸಾರ್ವಜನಿಕರೂ ಸಹ ಸಚಿವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
PublicNext
24/06/2025 07:47 am