", "articleSection": "Infrastructure,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/229640-1751248241-tmk.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "KumarTumakur" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತುಮಕೂರು: ನಾಮದ ಚಿಲುಮೆ ಜಿಂಕೆವನದಲ್ಲಿ ಟಿಕೆಟ್ ಹಗರಣದ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿ ಪ್ರಸಾರದ ಬೆನ್ನಲ್ಲೆ ನಿದ್ರೆಯಿಂದ ಎಚ್ಚೆತ್...Read more" } ", "keywords": "Tumakuru forest department CCTV, wildlife protection Tumakuru, CCTV cameras in forest, Tumakuru wildlife conservation, forest department initiative Tumakuru.", "url": "https://dashboard.publicnext.com/node" } ತುಮಕೂರು: ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ - ಜಿಂಕೆವನದಲ್ಲಿ ಸಿಸಿಟಿವಿ ಅಳವಡಿಸಿದ ಅರಣ್ಯ ಇಲಾಖೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ - ಜಿಂಕೆವನದಲ್ಲಿ ಸಿಸಿಟಿವಿ ಅಳವಡಿಸಿದ ಅರಣ್ಯ ಇಲಾಖೆ

ತುಮಕೂರು: ನಾಮದ ಚಿಲುಮೆ ಜಿಂಕೆವನದಲ್ಲಿ ಟಿಕೆಟ್ ಹಗರಣದ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿ ಪ್ರಸಾರದ ಬೆನ್ನಲ್ಲೆ ನಿದ್ರೆಯಿಂದ ಎಚ್ಚೆತ್ತ ಅರಣ್ಯ ಇಲಾಖೆ ತ್ವರಿತ ಕ್ರಮ ಕೈಗೊಂಡಿದೆ. ಇದೀಗ ಪ್ರವಾಸಿಗರ ನಿಯಂತ್ರಣ ಹಾಗೂ ಪಾರದರ್ಶಕತೆಗಾಗಿ ಜಿಂಕೆವನದ ಪ್ರವೇಶದ್ವಾರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಪ್ರತಿಯೊಬ್ಬ ಪ್ರವಾಸಿಗ ಟಿಕೆಟ್ ಪಡೆದು ಪ್ರವೇಶ ಪಡೆಯುವಂತೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.

ಈ ಹಿಂದೆ 28 ವರ್ಷಗಳಿಂದ ಟಿಕೆಟ್ ನಿಲ್ಲದೆ ಪ್ರವಾಸಿಗರನ್ನು ಒಳಗೆ ಬಿಡುತ್ತಿದ್ದ ಹೊರಗುತ್ತಿಗೆ ನೌಕರ ಶಿವಶಂಕರ ಎಂಬಾತನನ್ನು ಈಗ ಅಧಿಕಾರಿಗಳು ಕೆಲಸದಿಂದ ವಜಾ ಮಾಡಿದ್ದಾರೆ. ಇದೀಗ ಪ್ರವೇಶದ್ವಾರದಿಂದ ಬರುವ ಸರ್ಕಾರದ ಆದಾಯದಲ್ಲಿ ಏರಿಕೆ ಕಂಡಿದೆ. ವಿಶೇಷವಾಗಿ ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ಟಿಕೆಟ್ ಆದಾಯವು ದುಪ್ಪಟ್ಟಾಗುತ್ತಿದೆ.

ಅರಣ್ಯ ಇಲಾಖೆ ಇದೀಗ ಶಿವಶಂಕರನನ್ನು ವಜಾ ಮಾಡಿದರೂ, ಈ ಅಕ್ರಮದಲ್ಲಿ ಭಾಗಿಯಾಗಿದ್ದ ಇತರ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಈ ನಡುವೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್. ಅನುಪಮ ಅವರನ್ನು ಸಂಪರ್ಕಿಸಲು ಸಾರ್ವಜನಿಕರು ಹಾಗೂ ಮಾಧ್ಯಮಗಳು ಹಲವಾರು ಬಾರಿ ಕರೆ ಮಾಡಿದರೂ ಅವರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಇದು ಅವರ ಉದ್ದಟತನವನ್ನು ತೋರಿಸುತ್ತಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಪರಿಸರ ಪ್ರಿಯರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

Edited By : Manjunath H D
PublicNext

PublicNext

30/06/2025 07:20 am

Cinque Terre

18.47 K

Cinque Terre

0