", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/405356-1750819426-raste.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Honnuruswami Ballari" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಳ್ಳಾರಿ : ನಗರದ ರಸ್ತೆಗಳೆಲ್ಲ ಅಡಿಗಡಿಗೂ ಗುಂಡಿಗಳು ಬಿದ್ದು ಸಂಪೂರ್ಣ ಹಾಳಾಗಿ ಸುರ್ವಣ ಬಳ್ಳಾರಿಯ ಮೂಲ ಚಹರೆಯೇ ಬದಲಾಗಿದೆ. ನಗರದ ಜನನಿಬಿಡ...Read more" } ", "keywords": "Ballari, potholes, road accidents, road safety, infrastructure issues.", "url": "https://dashboard.publicnext.com/node" }
ಬಳ್ಳಾರಿ : ನಗರದ ರಸ್ತೆಗಳೆಲ್ಲ ಅಡಿಗಡಿಗೂ ಗುಂಡಿಗಳು ಬಿದ್ದು ಸಂಪೂರ್ಣ ಹಾಳಾಗಿ ಸುರ್ವಣ ಬಳ್ಳಾರಿಯ ಮೂಲ ಚಹರೆಯೇ ಬದಲಾಗಿದೆ.
ನಗರದ ಜನನಿಬಿಡ ಪ್ರದೇಶಗಳಾದ ಕೇಂದ್ರ ಬಸ್ ನಿಲ್ದಾಣ ಮುಂಭಾಗದ ರಸ್ತೆ, ಎಸ್ಪಿ ಸರ್ಕಲ್ ರಸ್ತೆಗಳು, ದುರ್ಗಮ್ಮ ಗುಡಿ, ರಾಯಲ್, ಸಂಗಮ್, ಮೋತಿ, ಬಂಡಿಮೋಟ್ ಇನ್ನೂ ಅನೇಕ ವೃತ್ತಗಳ ರಸ್ತೆಗಳು ತಗ್ಗು–ಗುಂಡಿಗಳಿಂದ ಆವೃತವಾಗಿವೆ.
ಡಾಂಬರ್ ಹಾಗೂ ಜಲ್ಲಿ ಕಿತ್ತು ಹೋಗಿ ರಸ್ತೆಗಳು ಧೂಳುಮಯವಾಗಿದ್ದು, ವಾಹನ ಸವಾರರು ಧೂಳಿನ ಮಜ್ಜನದೊಂದಿಗೆ ಪ್ರಯಾಣಿಸುವಂತಾಗಿದೆ. ಸ್ವಲ್ಪವೇ ಆಯತಪ್ಪಿದರೂ ‘ಗುಂಡಿ’ಯ ಅನಾಹುತ ತಪ್ಪಿದ್ದಲ್ಲ.
ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿಗೆ ನಗರದ ರಸ್ತೆಗಳು ಮಾರ್ಪಟ್ಟಿವೆ.
ಭಾರ ಹೊರಾಲಾಗದ ಜಿಲ್ಲಾ ಉಸ್ತುವಾರಿಗಳು, ಅಭಿವೃದ್ಧಿ ಹೆಸರಲ್ಲಿ ರಸ್ತೆಗಳನ್ನು ಅಗೆಯುವುದೊಂದನ್ನೇ ಅರಿತ ಶಾಸಕರು,
ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುವ ನಗರದ ಮಹಾಪೌರಿಂದ ನಾಗರಿಕರು, ರಸ್ತೆ ಸವಾರರು ಬೇಸತ್ತು ಹೋಗಿದ್ದಾರೆ.
ಇನ್ನದರೂ ಪಾಲಿಕೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಕ್ರಮ ವಹಿಸುವರ ಎಂದು ಕಾದನೋಡ ಬೇಕಿದೆ.
ವರದಿ : ಹೊನ್ನುರಸ್ವಾಮಿ ಕೆ.ಟಿ. ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ
PublicNext
25/06/2025 08:13 am