ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೈಪ್‌ಲೈನ್ ಕೆಲಸದ ವೇಳೆ ಮಣ್ಣು ಕುಸಿತ ನಾಲ್ವರು ಸಾವು – ಐವರು ಸಿಲುಕಿರುವ ಶಂಕೆ

ಜೈಪುರ: ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಪೈಪ್‌ಲೈನ್ ಅಳವಡಿಕೆ ವೇಳೆ ಮಣ್ಣು ಕುಸಿದ ಪರಿಣಾಮ ನಾಲ್ವರು ಕಾರ್ಮಿಕರು ಮೃತಪಟ್ಟು ಐವರು ಅವಶೇಷಗಳಡಿ ಸಿಲುಕಿರುವ ದುರಂತ ಸಂಭವಿಸಿದೆ.

ಇದು ಜಂಗಿ ಕಾ ನಾಗ್ಲಾ ಗ್ರಾಮದ ಬಳಿ ನಡೆದಿದೆ. ಇಲ್ಲಿ 10 ಅಡಿ ಆಳದ ಗುಂಡಿ ಪೈಪ್‌ಲೈನ್‌ಗೆ ಅಗೆದು, ಮತ್ತೆ ಅದನ್ನು ಕಾರ್ಮಿಕರು ಮಣ್ಣಿನಿಂದ ತುಂಬುತ್ತಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಆಡಳಿತ, ಪೊಲೀಸರು ಮತ್ತು NDRF ತಂಡ ಸ್ಥಳಕ್ಕೆ ಧಾವಿಸಿ ಮಣ್ಣು ತೆಗೆಯುವ ಯಂತ್ರಗಳ ಸಹಾಯದಿಂದ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈವರೆಗೆ ಆರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಅವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಇಬ್ಬರು ಗಂಭೀರ ಗಾಯಗಳೊಂದಿಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಐದು ಮಂದಿ ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಘಟನೆಗೆ ಕಾರಣವಾದ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ತನಿಖೆ ಆರಂಭವಾಗಿದೆ.

Edited By :
PublicNext

PublicNext

29/06/2025 12:55 pm

Cinque Terre

53.4 K

Cinque Terre

0

ಸಂಬಂಧಿತ ಸುದ್ದಿ