ಹೊಸನಗರ: ನರೇಂದ್ರ ಮೋದಿ ಅವರು ಪ್ರತಿ ತಿಂಗಳ ನಾಲ್ಕನೇ ಭಾನುವಾರದಂದು ಅಂದರೆ ಇಂದು ನಡೆಸಿಕೊಟ್ಟ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹೆಚ್. ಹಾಲಪ್ಪನವರು ಹುಂಚ ಮಹಾಶಕ್ತಿ ಕೇಂದ್ರದ ಹೆದ್ದಾರಿಪುರ ಬೂತ್ 7ರಲ್ಲಿ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ವೀಕ್ಷಿಸಿದರು.
ನಂತರ ಬಿಜೆಪಿ ಹೊಸನಗರ ಮಂಡಲದ ಹುಂಚ ಹೋಬಳಿ ವತಿಯಿಂದ ವಿಕಸಿತ ಭಾರತ ಅಮೃತಕಾಲ ಸಂಕಲ್ಪ ಸಾಧನ ಸಮಾವೇಶ ಕಾರ್ಯಕ್ರಮದಲ್ಲಿ ದೇಶದ ಅಭಿವೃದ್ಧಿ ವಿಚಾರವಾಗಿ ದೇಶದ ಸುಭದ್ರತೆ ಆರ್ಥಿಕ ವೈಜ್ಞಾನಿಕವಾಗಿ ಸಂಘಟನೆ ಹಾಗೂ ಇನ್ನೂ ಹಲವು ವಿಚಾರಗಳ ಬಗ್ಗೆ ಹಾಗೂ ಮೋದಿಜಿಯವರ ಹಲವಾರು ಸಾಧನೆಗಳ ವಿಚಾರವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಬಿ ಹರಿಕೃಷ್ಣ, ಹೊಸನಗರ ಮಂಡಲದ ಅಧ್ಯಕ್ಷರಾದ ಸುಬ್ರಮಣ್ಯ ಮತ್ತಿಮನೆ ತೀರ್ಥಹಳ್ಳಿ ಮಂಡಲದ ಅಧ್ಯಕ್ಷರಾದ ನವೀನ್ ಹೆದ್ದೂರು, ಗಣಪತಿ ಬೆಳಗೋಡು, ಮುಖಂಡರು ಪ್ರಮುಖರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
29/06/2025 02:40 pm