", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1751214261-savvv.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ: ಮಗಳಿಗೆ ಒಂದು ಒಳ್ಳೆಯ ವರನನ್ನು ನೋಡಿ ಮದುವೆ ಮಾಡಬೇಕೆಂದು ನೂರೆಂಟು ಕನಸು ಕಟ್ಟಿಕೊಂಡಿದ್ದ ಅಪ್ಪ. ಈ ನಡುವೆ ಮಗಳು ಮದುವೆಗೆ ಮೊದಲೇ ಗ...Read more" } ", "keywords": "Shivamogga, honour killing attempt, father arrested, pregnancy before marriage, crime news Karnataka", "url": "https://dashboard.publicnext.com/node" }
ಶಿವಮೊಗ್ಗ: ಮಗಳಿಗೆ ಒಂದು ಒಳ್ಳೆಯ ವರನನ್ನು ನೋಡಿ ಮದುವೆ ಮಾಡಬೇಕೆಂದು ನೂರೆಂಟು ಕನಸು ಕಟ್ಟಿಕೊಂಡಿದ್ದ ಅಪ್ಪ. ಈ ನಡುವೆ ಮಗಳು ಮದುವೆಗೆ ಮೊದಲೇ ಗರ್ಭಿಣಿಯಾಗಿ ಬಿಟ್ಟಿದ್ದಳು! ಮೋಸ ಮಾಡಿದ ಮಗಳ ಕೊಲೆಗೆ ಯತ್ನಿಸಿದ ಅಪ್ಪ ಇದೀಗ ಜೈಲು ಸೇರಿದ್ದಾನೆ.
ಸೊರಬ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಧರ್ಮನಾಯ್ಕ್ ಎನ್ನುವ ವ್ಯಕ್ತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೊಡ್ಡ ಮಗಳ ಮದುವೆ ಮಾಡಬೇಕೆಂದು ಆತ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಿದ್ದನು. ಈ ನಡುವೆ ಮಗಳು ತಂದೆಯ ಕನಸು ನುಚ್ಚುನೂರು ಮಾಡಿಬಿಟ್ಟಿದ್ದಳು. ಮದುವೆ ಆಗುವ ಮೊದಲೇ ಅವಳು ಗರ್ಭಿಣಿಯಾಗಿ ಬಿಟ್ಟಿದ್ದಳು.
ಊರಿನಲ್ಲಿ ಮಗಳ ಸುದ್ದಿ ಕೇಳಿದ್ರೆ ನನ್ನ ಮಾನ ಮರ್ಯಾದೆ ಹರಾಜು ಆಗುವುದು ಗ್ಯಾರಂಟಿ ಎನ್ನುವುದು ತಂದೆಗೆ ಗೊತ್ತಾಗಿತ್ತು. ಈ ಹಿನ್ನಲೆಯಲ್ಲಿ ಜೂನ್ 27ರಂದು ಮಗಳನ್ನು ಮಗಳವಳ್ಳಿ ಗ್ರಾಮದಿಂದ ಆಸ್ಪತ್ರೆಗೆ ತಪಾಸಣೆಗೆಂದು ಕರೆದುಕೊಂಡು ಹೋಗಿ, ಮಗಳು ತನ್ನ ಮರ್ಯಾದೆ ತೆಗೆದಿದ್ದಾಳೆ ಎನ್ನುವ ಕೋಪದಲ್ಲಿ ಮಗಳನ್ನು ಕುತ್ತಿಗೆ ಬಿಗಿದು ಕೊಲೆಗೆ ಯತ್ನಿಸುತ್ತಾನೆ. ಮಗಳು ಸತ್ತೇ ಹೋದ್ಲು ಅಂತಾ ಭಾವಿಸಿ ತಂದೆಯು ಪತ್ನಿಯನ್ನು ಕರೆದುಕೊಂಡು ವಾಪಸ್ ಮನೆಗೆ ತೆರಳುತ್ತಾನೆ. ಆದ್ರೆ, ಅದೃಷ್ಟ ಚೆನ್ನಾಗಿತ್ತು. ಮಗಳು ಪ್ರಜ್ಞೆ ತಪ್ಪಿ ಹೋಗಿ ಬಳಿಕ ಎಚ್ಚರವಾಗುತ್ತಾಳೆ. ಸೂಕ್ತ ಸಮಯದಲ್ಲಿ ಮಗಳು ಆಸ್ಪತ್ರೆಗೆ ದಾಖಲು ಆಗಿದ್ದರಿಂದ ಪ್ರಾಣಾಪಾಯದಿಂದ ಮಗಳು ಬಚಾವ್ ಆಗಿದ್ದಾಳೆ.
ಕಾಡಿನಲ್ಲಿ ಬಿಟ್ಟು ಹೋದ ತಂದೆ. ಇದೊಂದು ಮರ್ಯಾದೆ ಹತ್ಯೆ ಅಂತಾ ಅಂದುಕೊಂಡಿದ್ದ ತಾಯಿ ಕಣ್ಣೀರು ಹಾಕುತ್ತಿದ್ದಳು. ಆದ್ರೆ ಸೊರಬ ಪೊಲೀಸರು ತಾಯಿಗೆ ಮಗಳು ಸಾವು ಗೆದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನುವ ಮಾಹಿತಿ ನೀಡುತ್ತಾರೆ. ಇತ್ತ ತಾಯಿಯು ಮಗಳನ್ನು ಆಸ್ಪತ್ರೆಯಲ್ಲಿ ಬದುಕಿಸಲು ಹೋರಾಟ ನಡೆಸಿದ್ದಾಳೆ. ಈ ಹಿನ್ನಲೆಯಲ್ಲಿ ಪತ್ನಿ ಮತ್ತು ಎರಡನೇ ಮಗಳು ಮರ್ಯಾದೆ ಹತ್ಯೆಗೆ ಯತ್ನ ಕುರಿತು ಸದ್ಯ ಉಲ್ಟಾ ಹೊಡೆದಿದ್ದಾರೆ. ದೊಡ್ಡ ಮಗಳು ಮಾನಸಿಕ ಅಸ್ವಸ್ಥೆ. ಅವಳೇ ಸುಸೈಡ್ ಮಾಡಿಕೊಳ್ಳಲು ಹೋಗಿದ್ದಳು ಎಂದು ಹೊಸ ಕಥೆ ಹೇಳುತ್ತಿದ್ದಾರೆ.
ಮಗಳ ಮರ್ಯಾದೆ ಹತ್ಯೆಗೆ ಯತ್ನಿಸಿದ್ದ ತಂದೆಯನ್ನು ಸೊರಬ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ಧಾರೆ. ಸಮಾಜವೇ ತಲೆ ತಗ್ಗಿಸುವ ಹೇಯ ಕೃತ್ಯಕ್ಕೆ ತಂದೆ ಮುಂದಾಗಿದ್ದನು. ಮಗಳ ಹೊಟ್ಟೆಯಲ್ಲಿ ಮಗು ಇದೆ ಎನ್ನುವುದು ಗೊತ್ತಿದ್ದರೂ ಕೊಲೆಗೆ ಯತ್ನ ಮಾಡಿದ್ದು ಮಾತ್ರ ನೋವಿನ ಸಂಗತಿ.
-ವೀರೇಶ್ ಜಿ. ಹೊಸೂರು, ಪಬ್ಲಿಕ್ ನೆಕ್ಸ್ಟ್ ಶಿವಮೊಗ್ಗ
PublicNext
29/06/2025 09:54 pm