ಹಿರಿಯೂರು: ಸರ್ಕಾರಿ ಆಸ್ಪತ್ರೆ ವೈಧ್ಯ ನರ್ಸ್ಗೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾನುವಾರ ಬೆಳಿಗ್ಗೆ 8 ಗಂಟೆಗೆ ಬೆಳಕಿಗೆ ಬಂದಿದ್ದು, ಜವನಗೊಂಡನಹಳ್ಳಿ ಸರ್ಕಾರಿ ಆಸ್ಪತ್ರೆ ವೈಧ್ಯನ ಭ್ರಷ್ಟಾಚಾರ ಮುಖ ಬಯಲಾಗಿದೆ.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯ ಡಾ. ಕೃಷ್ಣ ಎಂಬುವವರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ಲತಾ ಎಂಬುವವರಿಗೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು ಬಯಲಾಗಿದೆ. ಕಾಂಟ್ರಾಕ್ಟ್ ಬೇಸಿಕ್ ಮೇಲೆ ಲತಾ ಕಾರ್ಯ ನಿರ್ವಹಿಸುತ್ತಿದ್ದರು, ಇದರ ರಿನಿವಲ್ಗೆ ಡಾ. ಕೃಷ್ಣ 5 ಸಾವಿರ ರೂ ಡಿಮ್ಯಾಂಡ್ ಮಾಡಿದ್ದಾರೆ.
ದುಡ್ಡು ಲೇಟ್ ಆಗಿ ಕೊಡಿ, ಆದ್ರೆ ಕಾಸು ಕೊಟ್ರೆ ರಿನಿವಲ್ ಮಾಡೋದು. ರಾಜಕೀಯ ಮಾಡ್ಬೇಡಿ, ನನ್ನತ್ರ ಏನೂ ನಡೆಯೋದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಜಪ್ಪಯ್ಯ ಅಂದ್ರು ದುಡ್ಡು ಕೊಡದೇ ನಾನು ಸಹಿ ಮಾಡಲ್ಲ, ದುಡ್ಡು ಕೊಡೋಕ್ ಲೇಟ್ ಮಾಡಿದ್ರೆ 10 ಸಾವಿರ ಕೊಡ್ಬೇಕಾಗುತ್ತೆ 3-4 ನಾಲ್ಕು ದಿನ ಟೈಮ್ ಕೊಡ್ತೇನೆ ಲೇಟ್ ಮಾಡಿದ್ರೆ 10 ಸಾವಿರ, ಇನ್ನೂ ಲೇಟ್ ಮಾಡಿದ್ರೆ 15 ಸಾವಿರ ಆಗುತ್ತೆ ಎಂದು ಹಣಕ್ಕೆ ಪೀಡಿಸಿರುವ ಆಡಿಯೋ ವೈರಲ್ ಆಗಿದೆ.
PublicNext
29/06/2025 04:30 pm