ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮೂರು: ಅನ್ಯ ರಾಜ್ಯದ ಕಾರ್ಮಿಕರ ನೇಮಕ ಹುನ್ನಾರ- ಕಾರ್ಖಾನೆ ಮುಂದೆ ಕನ್ನಡಿಗ ಕಾರ್ಮಿಕರ ಪ್ರತಿಭಟನೆ

ಮೊಳಕಾಲ್ಮೂರು: ಯಾವುದೇ ಮುನ್ಸೂಚನೆ ಇಲ್ಲದೆ ಕನ್ನಡಿಗ ಕಾರ್ಮಿಕರನ್ನು ವಜಾಗೊಳಿಸಿ ಅನ್ಯ ರಾಜ್ಯದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ವಡೇರಹಳ್ಳಿ ಗ್ರಾಮದ ಹರೀಶ್ ಸ್ಪಾಂಜಾ ಎಲ್ ಎಲ್ ಪಿ ಕಂಪನಿಯ ಮೈನ್ಸ್ ಫ್ಯಾಕ್ಟರಿ ಮುಂದೆ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಕಳೆದ 8-10 ವರ್ಷಗಳಿಂದಲೂ ಈ ಕಂಪನಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ಆದರೆ, ಈಗ ಕಂಪನಿಯ ಮ್ಯಾನೇಜರ್ ಏಕಾಏಕಿಯಾಗಿ "ನೀವು ಕೆಲಸಕ್ಕೆ ಬರಬೇಡಿ, ಕಂಪನಿ ನಷ್ಟದಲ್ಲಿ ನಡೆಯುತ್ತಿದೆ. ಹಾಗಾಗಿ ಕಂಪನಿಯನ್ನು ಮುಚ್ಚುತ್ತಿದ್ದೇವೆ" ಎಂದು ಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ.

ಕಂಪನಿಯ ನಡೆಯಿಂದ ಆಕ್ರೋಶಿತರಾದ ಕಾರ್ಮಿಕರು ಯಾವುದೇ ಮುನ್ಸೂಚನೆ ಇಲ್ಲದೆ 81 ಮಂದಿ ಕಾರ್ಮಿಕರನ್ನು ಏಕಾಏಕಿಯಾಗಿ ಕೆಲಸದಿಂದ ವಜಾಗೊಳಿಸಿರುವುದು ಕಾರ್ಮಿಕರಿಗೆ ಮಾಡಿದ ಅನ್ಯಾಯವಾಗಿದೆ. ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬಂದಿವೆ. ಈ ಕಂಪನಿಯನ್ನೇ ನಂಬಿ ಹಲವು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದೇವೆ. ಕಂಪನಿಯ ಏಕಾಏಕಿ ನಿರ್ಧಾರ ನಮಗೆ ಆಘಾತ ಉಂಟು ಮಾಡಿದೆ. ಕಂಪನಿ ಈವರೆಗೂ ನಮಗೆ ಇಎಸ್ಐ, ಪಿಎಫ್ ನೀಡಿಲ್ಲ.

ಕಂಪನಿಯು ಕಾರ್ಮಿಕರಿಗೆ ಯಾವುದೇ ಮುನ್ಸೂಚನೆ ನೀಡದೇ ಕಾರ್ಮಿಕರ ಕಾಯ್ದೆಗಳನ್ನು ಬದಿಗೊತ್ತಿ ಏಕಾಏಕಿಯಾಗಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ನಮಗೆ ಮಾಡಿದ ದ್ರೋಹ. ಸ್ಥಳೀಯವಾಗಿ ಇರುವ ಕನ್ನಡಿಗ ಕಾರ್ಮಿಕರನ್ನು ವಜಾಗೊಳಿಸಿ, ಅನ್ಯ ರಾಜ್ಯದಿಂದ ಕಾರ್ಮಿಕರನ್ನು ಕೆಲಸಕ್ಕೆ ಕರೆ ತಂದು ಫ್ಯಾಕ್ಟರಿ ನಡೆಸುವ ಹುನ್ನಾರ ನಡೆಯುತ್ತಿದೆ. ಅನ್ಯ ರಾಜ್ಯದವರಿಗೆ ಕಮ್ಮಿ ಸಂಬಳ ನೀಡಿ ಹೆಚ್ಚು ದುಡಿಸಿಕೊಳ್ಳಬಹುದು ಎನ್ನುವ ಎನ್ನುವ ದುರಾಸೆಯಿಂದ ಮಾಲೀಕರು ನಮ್ಮನ್ನು ಕೆಲಸದಿಂದ ವಜಾಗೊಳಿಸುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದರು.

Edited By : Vinayak Patil
Kshetra Samachara

Kshetra Samachara

30/06/2025 06:35 pm

Cinque Terre

2.66 K

Cinque Terre

0

ಸಂಬಂಧಿತ ಸುದ್ದಿ