", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/229640-1751121163-cl.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಳ್ಳಕೆರೆ: ಸಾಮಾಜಿಕ ಹೋರಾಟಗಾರ ಹಾಗೂ ಪ್ರಗತಿಪರ ರೈತ ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಇವರ ವಾಸದ ಕುಟೀರಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು ...Read more" } ", "keywords": "Challakere hut fire incident, social activist Chitralingappa, arson attack Challakere, Chitralingappa residence attacked, unknown miscreants set fire.", "url": "https://dashboard.publicnext.com/node" } ಚಳ್ಳಕೆರೆ: ಸಾಮಾಜಿಕ ಹೋರಾಟಗಾರ ಚಿತ್ರಲಿಂಗಪ್ಪನ ವಾಸದ ಕುಟೀರಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಸಾಮಾಜಿಕ ಹೋರಾಟಗಾರ ಚಿತ್ರಲಿಂಗಪ್ಪನ ವಾಸದ ಕುಟೀರಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು..!

ಚಳ್ಳಕೆರೆ: ಸಾಮಾಜಿಕ ಹೋರಾಟಗಾರ ಹಾಗೂ ಪ್ರಗತಿಪರ ರೈತ ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಇವರ ವಾಸದ ಕುಟೀರಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು ಕುಟೀರದಲ್ಲಿದ್ದ ಕಂಪ್ಯೂಟರ್, ಫ್ರಿಡ್ಜ್, ಬಟ್ಟೆ, ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿ ವ್ಯಾಪ್ತಿಯ ಪಿ.ಮಹದೇವರಪುರ ಗ್ರಾಮದ ಬಳಿ ರೈತ ಪಿಲ್ಲಹಳ್ಳಿ ಚಿತ್ರಲಿಂಗಪ್ಪ ಎಂಬುವವರ ಜಮೀನಿನಲ್ಲಿದ್ದ ಕುಟೀರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕುಟೀರ ಸಂಪೂರ್ಣ ಸುಟ್ಟು ಲಕ್ಷಾಂತರ ರೂ. ನಷ್ಟವಾಗಿದೆ.

ಕಳೆದ ಕೆಲವು ವರ್ಷಗಳ ಹಿಂದೆ ಜಮೀನಿನಲ್ಲಿ ವಾಸಿಸಲು ಸುಮಾರು 5 ಲಕ್ಷ ವೆಚ್ಚದ ಕುಟೀರ ನಿರ್ಮಿಸಲಾಗಿತ್ತು. ಇಲ್ಲಿದ್ದ ಕಂಪ್ಯೂಟರ್, ಟಿವಿ, ಫ್ರಿಡ್ಜ್ ಬಟ್ಟೆ ಆಹಾರ ಪದಾರ್ಥಗಳು ಸೇರಿದಂತೆ ಮೂಲ ದಾಖಲಾತಿಗಳನ್ನು ಇಡಲಾಗಿತ್ತು . ಯಾರೋ ಕಿಡಿಗೇಡಿಗಳು ಕುಟೀರಕ್ಕೆ ಬೆಂಕಿ ಇಟ್ಟ ಕಾರಣ ಕುಟೀರದಲ್ಲಿ ಇದ್ದಂತಹ ವಸ್ತುಗಳೆಲ್ಲವೂ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಜಮೀನಿನಲ್ಲಿ ಹಾಕಿದ್ದ ಕೃಷಿ ಪರಿಕರಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ. ಕಿಡಿಗೇಡಿಗಳು 1 ಗಂಟೆಯ ಸಮಯದಲ್ಲಿ ಬೆಂಕಿ ಹಚ್ಚಿ ಹೋಗಿದ್ದಾರೆಂದು ಪ್ರಗತಿಪರ ರೈತ ಸಿ ಚಿತ್ರಲಿಂಗಪ್ಪ ಆರೋಪಿಸಿದ್ದಾರೆ. ಸ್ಥಳಕ್ಕೆ ಪರಶುರಾಮಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Edited By : Manjunath H D
PublicNext

PublicNext

28/06/2025 08:02 pm

Cinque Terre

21.8 K

Cinque Terre

0

ಸಂಬಂಧಿತ ಸುದ್ದಿ