", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/34454720250627071548filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "9739875729" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹಿರಿಯೂರು: ತಾಲ್ಲೂಕಿನ ಕಕ್ಕಯ್ಯನಹಟ್ಟಿ ಗ್ರಾಮದಲ್ಲಿ ಪಂಪ್ಸೆಟ್ಗೆ ಅಳವಡಿಸಿದ್ದ ಕೇಬಲ್ ಕಳವು ಮಾಡಲು ಬಂದಿದ್ದ ಇಬ್ಬರು ಕಳ್ಳರಲ್ಲಿ ಒಬ್ಬನನ...Read more" } ", "keywords": ""pump set cable theft, cable thief arrest, farmer's property crime, rural theft, agricultural crime, police action" ", "url": "https://dashboard.publicnext.com/node" }
ಹಿರಿಯೂರು: ತಾಲ್ಲೂಕಿನ ಕಕ್ಕಯ್ಯನಹಟ್ಟಿ ಗ್ರಾಮದಲ್ಲಿ ಪಂಪ್ಸೆಟ್ಗೆ ಅಳವಡಿಸಿದ್ದ ಕೇಬಲ್ ಕಳವು ಮಾಡಲು ಬಂದಿದ್ದ ಇಬ್ಬರು ಕಳ್ಳರಲ್ಲಿ ಒಬ್ಬನನ್ನು ರೈತರೇ ಮಾಲು ಸಮೇತ ಹಿಡಿದು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ...ಗ್ರಾಮದ ರೈತರು ರಾತ್ರಿ ಜಮೀನಿನಲ್ಲಿ ನೀರು ಹಾಯಿಸುತ್ತಿದ್ದರು.ಈ ಸಮಯದಲ್ಲಿ ಬೈಕಿನಲ್ಲಿ ಬಂದ ಇಬ್ಬರು ಕೇಬಲ್ ಕಳವಿಗೆ ಮುಂದಾಗಿದ್ದರು.
ಇದನ್ನು ಗಮನಿಸಿದ ರೈತರು ಕಳ್ಳರನ್ನ ಬೆನ್ನಟ್ಟಿದ್ದರು. ರೈತರು ತಮ್ಮತ್ತ ಬರುವುದನ್ನು ಕಂಡ ಕಳ್ಳನೊಬ್ಬ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಮತ್ತೊಬ್ಬ ದಿಲೀಪ್ ಕುಮಾರ್ ಎಂಬುವರ ತೋಟದ ಗುಡಿಸಲಿನಲ್ಲಿ ಅವಿತುಕೊಂಡಿದ್ದ ಮತ್ತೊಬ್ಬನನ್ನು ಹಿಡಿದಿದ್ದಾರೆ.
ಸೆರೆ ಸಿಕ್ಕವನನ್ನು ಹೊಸದುರ್ಗ ತಾಲ್ಲೂಕಿನ ಹುಲಿಕಟ್ಟೆ ಗ್ರಾಮದ ಧರಣೆಪ್ಪ ಎಂದು ಗುರುತಿಸಲಾಗಿದೆ. ಈತ ಬೈಕಿನಲ್ಲಿ ತಪ್ಪಿಸಿಕೊಂಡವನ ಹೆಸರು ಬಾಯಿ ಬಿಡುತ್ತಿಲ್ಲ' ಎಂದು ಗ್ರಾಮಸ್ಥರು. ತಾಲ್ಲೂಕಿನಲ್ಲಿ ಕೇಬಲ್ ಕಳ್ಳರ ದೊಡ್ಡ ಜಾಲವೇ ಇದ್ದು, ಇವರನ್ನು ಬಿಡಿಸಲು ಕೆಲವು ರಾಜಕಾರಣಿಗಳು ಮುಂದಾಗುತ್ತಿದ್ದಾರೆ. ಪೊಲೀಸರು ಯಾರ ಒತ್ತಡಕ್ಕೂ ಮಣಿಯದೆ, ಸೂಕ್ತ ವಿಚಾರಣೆ ನಡೆಸಿ ಕೇಬಲ್ ಕಳೆದುಕೊಂಡಿರುವ ರೈತರಿಗೆ ನ್ಯಾಯ ಒದಗಿಸಬೇಕು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸುವ ಮೂಲಕ ತಕ್ಕ ಪಾಠ ಕಲಿಸಬೇಕು' ಎಂದು ಕಕ್ಕನಹಟ್ಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
Kshetra Samachara
27/06/2025 07:18 am