ಹುಬ್ಬಳ್ಳಿ: ದೂರದ ಪ್ರಯಾಣಕ್ಕೆ ರೈಲ್ವೆ ಉತ್ತಮ ಅಂತಾರೆ, ಯಾಕೆಂದ್ರೆ ರೈಲಿನಲ್ಲಿ ಸೂಕ್ತವಾದ ಶೌಚಾಲಯ ಇರುತ್ತದೆಂದು. ಆದ್ರೆ ಹುಬ್ಬಳ್ಳಿ-ತಿರುಪತಿ ರೈಲಿನ ಶೌಚಾಲಯದಲ್ಲಿ ನೀರು ಇಲ್ಲದೆ, ಸೂಕ್ತವಾದ ವ್ಯವಸ್ಥೆನೂ ಇಲ್ಲದೆ ಪ್ರಯಾಣಿಕರು ಪರದಾಡಿದ್ದಾರೆ.
ಕೋಲ್ಹಾಪೂರದಿಂದ ತಿರುಪತಿಗೆ ಹೋಗುವ ಹರಿಪ್ರಿಯಾ ಎಕ್ಸಪ್ರೆಸ್ ರೈಲಿನಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಾರೆ. ಇದರಿಂದ ರೈಲ್ವೆ ಇಲಾಖೆಗೆ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬರುತ್ತಿದೆ. ಆದ್ರೆ ರೈಲ್ವೆ ಇಲಾಖೆ ತನ್ನ ಖಜಾನೆ ಭರ್ತಿ ಮಾಡಿಕೊಂಡು ಬೋಗಿಗಳ ನಿರ್ವಹನೆಯತ್ತ ನಿರ್ಲಕ್ಷ್ಯ ತೋರಿದೆ. ಪ್ರಯಾಣಿಕರು ಪ್ರಯಾಣಿಸುವ ಬೋಗಿಯಲ್ಲಿ ಗಬ್ಬೆದ್ದ ಶಾಚಾಲಯಗಳು ನೀರಿಲ್ಲದೆ ದುರ್ನಾತದಿಂದ ನಾರುತ್ತಿವೆ. ಕೈ ತೊಳೆಯುವ ವಾಷ್ ಬೇಸಿನ್ಲ್ಲೂ ಕೂಡ ನೀರು ಬರುತ್ತಿರಲಿಲ್ಲ. ಇದರಿಂದ ಜನರು ಮೂಗಿಗೆ ಬಟ್ಟೆ ಹಿಡಿದುಕೊಂಡು ರೈಲ್ವೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಹುಬ್ಬಳ್ಳಿ ಜಂಕ್ಷನ್ನಲ್ಲಿ ಸುಮಾರು 30 ನಿಮಿಷ ರೇಲ್ವೆ ನಿಂತಿತ್ತು. ಆದ್ರೆ ಈ 132 ದೂರವಾಣಿ ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿಯಲ್ಲಿತ್ತು. ಹತ್ತಾರು ಜನರು ರೈಲ್ವೆ ಬೋಗಿಯಲ್ಲಿನ ಸ್ವಚ್ಛತೆ ಹಾಗೂ ನೀರಿನ ಸಮಸ್ಯೆ ಬಗ್ಗೆ ದೂರು ನೀಡಿದರೂ ಯಾವೊಬ್ಬ ಅಧಿಕಾರಿ ಹಾಗೂ ಸ್ವಚ್ಛತಾ ಏಜನ್ಸಿಗಳು ಈ ಕಡೆ ಕ್ಯಾರೆ ಅನ್ನಲಿಲ್ಲ.
ಇನ್ನು ಒಂದು ಕಡೆ ಪ್ರಧಾನಿ ಮೋದಿ ಅವರು ರೈಲ್ವೆ ಇಲಾಖೆ ಅಧುನಿಕರಣಕ್ಕೆ ಪಣ ತೊಟ್ಟಿದೆ. ಎಲ್ಲ ರೈಲುಗಳಲ್ಲಿ ಸ್ವಚ್ಛತಾ ಹೀ ಸೇವಾ ಎಂಬ ನಾನ್ನುಡಿಯೊಂದಿಗೆ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ. ಆದ್ರೆ ಇವತ್ತಿನ ಈ ಚಿತ್ರಣಗಳನ್ನು ನೋಡಿದರೆ ಕೇಂದ್ರ ಸರ್ಕಾರದ ಸ್ವಚ್ಛತಾ ಹೀ ಸೇವಾ ಬರೀ ಮಾತಿನಲ್ಲಿದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಒಟ್ಟಾರೆ ಈ ವಿಷಯವನ್ನು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಹಾಗೂ ವಿ. ಸೋಮಣ್ಣ ಅವರು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಹಾಗೂ ಸಂಬಂಧಪಟ್ಟ ಎಜನ್ಸಿ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ ಅನ್ನೋದು ಪ್ರಯಾಣಿಕರ ನೋವಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/06/2025 05:04 pm