ಕುಂದಗೋಳ : ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ, ಶಾಲಾ ಶಿಕ್ಷಣ ಇಲಾಖೆಯೆ ನಿಯಮ ಮೀರಿ ತಪ್ಪು ಮಾಡಿದ್ರೇ ನ್ಯಾಯ ಹೇಳೋರು ಯಾರು ? ಎಂಬ ಪ್ರಶ್ನೆ ಕುಂದಗೋಳ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಮುಂದೆ ಬಂದಿದೆ.
2025-26 ನೇ ಸಾಲಿನ ನೂತನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ತಿಂಗಳು ಕಳೆದಿಲ್ಲಾ, ಹಿರೇಹರಕುಣಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಹೊಸದಾಗಿ ಆದೇಶ ಇಲ್ಲದೆ 12 ಜನ ವಿದ್ಯಾರ್ಥಿನಿಯರಿಗೆ ಪ್ರವೇಶಾತಿ ನೀಡಿರುವುದು ಯಾಕೆ ? ಎಂಬ ಪ್ರಶ್ನೆ ಕೇಳಿ ಬಂದಿದೆ.
ಅಷ್ಟಕ್ಕೂ, ಈ ಪ್ರಶ್ನೆ ಮಾಡಿರೋದು ಇದೇ ಹಿರೇಹರಕುಣಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಈ ವರ್ಷ 12 ಜನ ವಿದ್ಯಾರ್ಥಿನಿಯರಿಗೆ ದಾಖಲು ಮಾಡಿಕೊಂಡಿದ್ದಾರೆ.
ಈ ಪರಿಣಾಮ ಇದೇ ಹಿರೇಹರಕುಣಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಕೊರತೆ ಕಾಡುತ್ತಿರುವ ಕಾರಣ ಸ್ವತಃ ಶಿಕ್ಷಕರೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಿ ನ್ಯಾಯ ಕೇಳಿದ್ದಾರೆ.
ಈ ವಿಷಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಿ, ಮೊದಲಿನ ಯಥಾಸ್ಥಿತಿ ಮುಂದುವರೆಸಲು ತಿಳಿಸಿದ್ದರೂ ಮುಂದಿನ ಕ್ರಮ ಏನು ? ಎಂಬುದು ತಿಳಿದಿಲ್ಲಾ.
ಒಟ್ಟಾರೆ ತಪ್ಪುನ್ನು ತಿದ್ದಬೇಕಾದ ಮುಖ್ಯ ಶಿಕ್ಷಕರೇ ತಪ್ಪು ಮಾಡಿದ್ರೇ ನ್ಯಾಯ ಹೇಳೋರು ಯಾರು ಎಂಬಂತಾಗಿದೆ ಶಾಲಾ ಶಿಕ್ಷಣ ಇಲಾಖೆ ಪರಿಸ್ಥಿತಿ ?
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2025 09:27 pm