", "articleSection": "Infrastructure,Nature,Government", "image": { "@type": "ImageObject", "url": "https://prod.cdn.publicnext.com/s3fs-public/229640-1751200957-dru.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯ ನಡುವೆ ಟ್ರೆಕ್ಕ...Read more" } ", "keywords": "Mudigere trekking despite rain, tourists ignore weather warnings, trekking in Mudigere, local concerns, Western Ghats trekking issues.", "url": "https://dashboard.publicnext.com/node" } ಮೂಡಿಗೆರೆ: ನಿರಂತರ ಮಳೆ ಲೆಕ್ಕಿಸದೆ ಪ್ರವಾಸಿಗರ ಟ್ರೆಕ್ಕಿಂಗ್, ಚಾರಣ- ಸ್ಥಳೀಯರ ಅಸಮಾಧಾನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ: ನಿರಂತರ ಮಳೆ ಲೆಕ್ಕಿಸದೆ ಪ್ರವಾಸಿಗರ ಟ್ರೆಕ್ಕಿಂಗ್, ಚಾರಣ- ಸ್ಥಳೀಯರ ಅಸಮಾಧಾನ

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯ ನಡುವೆ ಟ್ರೆಕ್ಕಿಂಗ್ ತೆರಳುವ ಪ್ರವಾಸಿಗರ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎತ್ತಿನಭುಜ ಸೇರಿದಂತೆ ಶಿಶಿಲ-ಬೈರಾಪುರದಂತಹ ಮಳೆ ಸುರಿಯುವ ಹಾಗೂ ಭೂ ಕುಸಿತದ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಲ್ಲಿ ಪ್ರವಾಸಿಗರ ಚಾರಣವನ್ನು ತಕ್ಷಣ ಸ್ಥಗಿತಗೊಳಿಸಬೇಕೆಂಬ ಆಗ್ರಹ ಇದೀಗ ಕೇಳಿ ಬಂದಿದೆ. ಚಾರಣದ ಮಾರ್ಗದಲ್ಲಿ ನಿರಂತರ ಮಳೆಯಿಂದ ರಸ್ತೆಗಳು ಜಾರುತ್ತಿದ್ದು, ಕೆಲ ಮರಗಳು ಬೀಳುವ ಹಂತದಲ್ಲಿದೆ. ಭೂಮಿಯು ಕುಸಿಯುವ ಸಾಧ್ಯತೆಯೇ ಹೆಚ್ಚು. ಅಲ್ಲದೇ ಚಾರಣಕ್ಕೆ ತೆರಳುವ ಸ್ಥಳಗಳು ದಟ್ಟ ಅರಣ್ಯದಲ್ಲಿರುವ ಜೊತೆಗೆ ವನ್ಯಮೃಗಗಳ ಆವಾಸ ಸ್ಥಾನವಾಗಿದೆ.

ಇಂತಹ ಸ್ಥಳಗಳಲ್ಲಿ ನೆಟ್‌ವರ್ಕ್ ಸಮಸ್ಯೆಯೂ ಇದೆ. ಇದೆಲ್ಲವನ್ನು ಲೆಕ್ಕಿಸದೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ನೂರಾರು ಪ್ರವಾಸಿಗರು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಸುಮಾರು 7 ಕಿ.ಮೀ. ದೂರದ ಕಡಿದಾದ ಮಾರ್ಗದಲ್ಲಿ ನಡೆದುಕೊಂಡು ಎತ್ತಿನಭುಜ ತಲುಪುತ್ತಿದ್ದಾರೆ. ಈ ಭಾಗದಲ್ಲಿ ಧಾರಕಾರ ಮಳೆಯಾಗಿದ್ದು ಇಲ್ಲೇನಾದರೂ ಪ್ರವಾಸಿಗರಿಗೆ ಆಪತ್ತು ಸಂಭವಿಸಿದರೆ ಯಾರು ಜವಾಬ್ದಾರಿ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಸದ್ಯಕ್ಕೆ ಮಳೆಗಾಲ ಮುಗಿಯುವ ವರೆಗೆ ಟ್ರೆಕ್ಕಿಂಗನ್ನು ಸರ್ಕಾರ ಹಾಗೂ ಅರಣ್ಯ ಇಲಾಖೆ ತಕ್ಷಣ ನಿಷೇಧಿಸುವಂತೆ ಆಗ್ರಹ ವ್ಯಕ್ತವಾಗಿದೆ.

Edited By : Manjunath H D
PublicNext

PublicNext

29/06/2025 06:13 pm

Cinque Terre

19.2 K

Cinque Terre

0

ಸಂಬಂಧಿತ ಸುದ್ದಿ