", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/286525-1751176281-WhatsApp-Image-2025-06-29-at-11.21.13-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಳಸ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಕಳಸ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ತೀವ್ರ ಮ...Read more" } ", "keywords": "Shivamogga, office leakage, administrative issues, public grievances, government office problems, Karnataka news.", "url": "https://dashboard.publicnext.com/node" } ಕಳಸ: ಮುಂಗಾರು ಮಳೆಯ ಆರ್ಭಟ: ರಾಜಕಾಲುವೆ ಪಕ್ಕದ ಮನೆಗಳಿಗೆ ಭೂಕುಸಿತದ ಭೀತಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸ: ಮುಂಗಾರು ಮಳೆಯ ಆರ್ಭಟ: ರಾಜಕಾಲುವೆ ಪಕ್ಕದ ಮನೆಗಳಿಗೆ ಭೂಕುಸಿತದ ಭೀತಿ

ಕಳಸ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಕಳಸ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ತೀವ್ರ ಮಳೆಯಿಂದ ಕಳಸ ಪಟ್ಟಣದ ಪ್ರಮುಖ ರಸ್ತೆಯಲ್ಲಿರುವ ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕಾಲುವೆ ಪಕ್ಕದಲ್ಲಿ ನಿರ್ಮಿಸಿರುವ ತಡೆಗೋಡೆಯ ಕಲ್ಲುಗಳು ಕುಸಿಯಲು ಆರಂಭಿಸಿವೆ. ಕಲ್ಲುಗಳು ಜರಿಯುತ್ತಿರುವುದರಿಂದ ಕಾಲುವೆ ಪಕ್ಕದಲ್ಲಿ ಮಣ್ಣು ಸ್ವಲ್ಪ ಸ್ವಲ್ಪವೇ ಕುಸಿಯುತ್ತಿದ್ದು ಅಕ್ಕ ಪಕ್ಕದ ಮನೆಗಳು ಕುಸಿತದ ಭೀತಿಗೆ ಒಳಗಾಗಿದ್ದು, ನಿವಾಸಿಗಳು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಮಳೆ ಹೀಗೇ ಮುಂದುವರೆದರೆ ರಾಜಕಾಲುವೆಗೆ ಕಟ್ಟಿರುವ ಸೇತುವೆಯೂ ಕುಸಿಯುವ ಸಾಧ್ಯತೆ ಉಂಟುಗಿದೆ. ಒಂದು ವೇಳೆ ಸೇತುವೆ ಧರೆಗುರುಳಿದರೆ, ಕಳಸ ಪಟ್ಟಣದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುವ ಭೀತಿ ವ್ಯಕ್ತವಾಗಿದೆ.

ಈ ಬಗ್ಗೆ ಕಳೆದ ಹಲವು ವರ್ಷಗಳಿಂದ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಭೂಮಿ ಕುಸಿಯುತ್ತಿರುವ ಹಿನ್ನೆಯಲ್ಲಿ ಸ್ಥಳೀಯರು ತಮ್ಮ ಮನೆಗಳ ಉಳಿವಿಗಾಗಿ ಟಾರ್ಪಲ್ ಹಾಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ಮಣ್ಣು ತುಂಬಿ ತಾತ್ಕಾಲಿಕ ಭೂಕುಸಿತ ತಡೆಗಟ್ಟುಲು ಮುಂದಾಗಿದ್ದಾರೆ.

ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

29/06/2025 11:22 am

Cinque Terre

25.47 K

Cinque Terre

0

ಸಂಬಂಧಿತ ಸುದ್ದಿ