", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/11357220250630114244filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "8971147028" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾಪು: ಕಳೆದ ಮೇ ತಿಂಗಳಲ್ಲಿ ಬೆಂಗಳೂರು ಉಡುಪಿ ರೈಲಿನಲ್ಲಿ ಉಡುಪಿಗೆ ಬರುತ್ತಿದ್ದ ರಾಧಿಕಾ ಎಂಬವರ ಬ್ಯಾಗ್ನೊಳಗಿದ್ದ ಪರ್ಸ್ನಿಂದ ಲಕ್ಷಾಂತರ ರೂಪ...Read more" } ", "keywords": "Kapu, train theft, gold jewelry stolen, woman traveler, police complaint. ", "url": "https://dashboard.publicnext.com/node" }
ಕಾಪು: ಕಳೆದ ಮೇ ತಿಂಗಳಲ್ಲಿ ಬೆಂಗಳೂರು ಉಡುಪಿ ರೈಲಿನಲ್ಲಿ ಉಡುಪಿಗೆ ಬರುತ್ತಿದ್ದ ರಾಧಿಕಾ ಎಂಬವರ ಬ್ಯಾಗ್ನೊಳಗಿದ್ದ ಪರ್ಸ್ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
ಕಳೆದ ಮೇ 22ರಂದು ಬೆಂಗಳೂರು ಯಲಹಂಕ ನಿವಾಸಿ ರಾಧಿಕಾ ಅವರು ಸಹೋದರ ಹರಿಪ್ರಸಾದ್ ಅವರೊಂದಿಗೆ ಪಂಚಗಂಗಾ ಎಕ್ಸ್ಪ್ರೆಸ್ ರೈಲಿನಲ್ಲಿ ಉಡುಪಿಗೆ ಆಗಮಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ರಾಧಿಕಾ ಅವರು ರಾತ್ರಿ ಮಲಗುವ ವೇಳೆ ಚಿನ್ನದ ಒಡವೆಗಳಿದ್ದ ಪರ್ಸನ್ನು ಬ್ಯಾಗಿನಲ್ಲಿ ಇಟ್ಟು ಆ ಬ್ಯಾಗನ್ನು ತಮ್ಮ ತಲೆಯ ಪಕ್ಕದಲ್ಲಿ ಇಟ್ಟು ಮಲಗಿದ್ದರು. ಮೇ 23ರಂದು ಬೆಳಿಗ್ಗೆ ಎಚ್ಚರಗೊಂಡು ಬ್ಯಾಗ್ ನೋಡಿದಾಗ ಚಿನ್ನದ ಒಡವೆಗಳಿದ್ದ ಪರ್ಸ್ ಮತ್ತು ಅದರ ಜತೆಯಲ್ಲಿ ಕವರ್ನಲ್ಲಿದ್ದ ಹಣ ಕಾಣೆಯಾಗಿತ್ತು.
ಪರ್ಸ್ನಲ್ಲಿದ್ದ 22 ಗ್ರಾಂ ತೂಕದ ಹವಳದ ಚಿನ್ನದ ನೆಕ್ಲಸ್, 22 ಗ್ರಾಂ ತೂಕದ 2 ಚಿನ್ನದ ಬಳೆಗಳು, 36 ಗ್ರಾಂ ತೂಕದ ಚಿನ್ನದ ಮುತ್ತಿನ ಹಾರ ಸೇರಿದಂತೆ 16.69 ಲಕ್ಷ ರೂ. ಮೌಲ್ಯದ 170.4 ಗ್ರಾಂ ಚಿನ್ನಾಭರಣ ಹಾಗೂ 3 ಸಾವಿರ ರೂ. ನಗದು ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kshetra Samachara
30/06/2025 11:42 am