", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1751274751-bgm9.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ : ಹುಕ್ಕೇರಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ...Read more" } ", "keywords": "Shrirama Sena workers attack case, SP statement on Shrirama Sena case, police investigation update, Shrirama Sena workers tied to tree and beaten, latest news on Shrirama Sena case, police probe twist in Shrirama Sena workers assault case.", "url": "https://dashboard.publicnext.com/node" }
ಬೆಳಗಾವಿ : ಹುಕ್ಕೇರಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಎಸ್ ಪಿ ಪ್ರತಿಕ್ರಿಯೆ ನೀಡಿದ್ದು, ಶ್ರೀರಾಮಸೇನೆಯ ಐವರು ಕಾರ್ಯಕರ್ತರಲ್ಲಿ ಓರ್ವ ರೌಡಿಶೀಟರ್ ಆಗಿದ್ದು, ಆತ ಈಗಾಗಲೇ ಗಡಿಪಾರಾಗಿದ್ದಾನೆ. ಸಮಾಜಕ್ಕೆ ಕಂಟಕರಾದವರು, ಯಾವುದೋ ಸಂಘಟನೆಯ ಹೆಸರನ್ನು ಹೇಳಿ ಇಂತಹ ಘಟನೆಗಳಿಗೆ ಆಸ್ಪದ ನೀಡುತ್ತಿದ್ದಾರೆ ಎಂದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸರು ಪ್ರಕರಣ ದಾಖಲಿಸಿಲ್ಲವೆಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ. ಸಂಘಟನೆಗಳು ಮೊದಲು ಗಡಿಪಾರಾದ ರೌಡಿಶೀಟರ್ ಸಂಘಟನೆಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆಂಬುದನ್ನು ಮೊದಲೂ ಅವಲೋಕಿಸಲಿ. ಕಾನೂನು ಕೈಗೆತ್ತಿಕೊಂಡಿರುವುದ ತಪ್ಪು, ಅದರ ವಿರುದ್ಧ ಈಗಾಗಲೇ ಕಾರ್ಯಾಚರಣೆ ನಡೆಸಲಾಗಿದೆ. ಆದರೇ, ರೌಡಿಶೀಟರ್'ನನ್ನು ವಹಿಸಿಕೊಂಡು ಪ್ರತಿಭಟನೆ ಮಾಡಲು ಮುಂದಾದರೇ ಯಾವುದೇ ಅವಕಾಶ ನೀಡಲ್ಲ ಎಂದರು.
ಈಗಾಗಲೇ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮರಕ್ಕೆ ಕಟ್ಟಿ ಹೊಡೆದವರಲ್ಲಿ ಓರ್ವ ಹಿಂದೂ ಮತ್ತು ಮೂವರು ಮುಸ್ಲಿಂರಿದ್ದಾರೆ. ಆದರೇ ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಬೇರೆ ರೀತಿಯಾಗಿ ವರದಿ ಮಾಡಲಾಗಿದೆ. ಅನ್ಯ ಕೋಮಿನವರಿಂದ ಹಿಂದೂಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ ಎಂದರು.
ಅಕ್ರಮ ಗೋಸಾಗಾಟವೇ ಇದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡದೇ ಕೇವಲ ಹೆಣ್ಣುಮಕ್ಕಳಿರುವ ಮನೆಗೆ ಶ್ರೀರಾಮಸೇನೆಯ ಕಾರ್ಯಕರ್ತರೆಂದು ಹೇಳಲಾದ ಯುವಕರು ನುಗ್ಗಿದ್ದು ಕಾನೂನಿನ ಪ್ರಕಾರ ತಪ್ಪು. ಅಲ್ಲದೇ ಗ್ರಾಮಸ್ಥರು ಕೂಡ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು, ಅಪರಾಧ ಎಂದರು.
PublicNext
30/06/2025 02:42 pm