ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗೋವಿನ ರುಂಡ ರಸ್ತೆಯಲ್ಲಿ ಎಸೆದ ಪ್ರಕರಣ : 6 ಮಂದಿ ಬಂಧನ - ಎಸ್ಪಿ ಹರಿರಾಮ್ ಶಂಕರ್

ಉಡುಪಿ: ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಕುಂಜಾಲ್‌ ಜಂಕ್ಷನ್‌ ಬಳಿ ಗೋವಿನ ರುಂಡವನ್ನು ರಸ್ತೆಯಲ್ಲೇ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾಗಿ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

ರಾಮ(49) ಕುಂಜಾಲು, ಪ್ರಸಾದ್‌(21) ಕುಂಜಾಲು, ನವೀನ್‌(35) ಮಟಪಾಡಿ, ಕೇಶವ ನಾಯ್ಕ್‌(50) ಸಂದೇಶ(35) ರಾಜೇಶ್ (28) ಕುಂಜಾಲು ಬಂಧಿತ ಆರೋಪಿಗಳು.ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾಗಿ ಎಸ್ಪಿ ತಿಳಿಸಿದ್ದಾರೆ.

ಇವರು ದನವನ್ನು ಕಡಿದು ಅದರ ಅವಶೇಷಗಳನ್ನು ವಾಹನದಲ್ಲಿ ಸಾಗಿಸುವಾಗ ಅದರ ಕೆಲವು ಅವಶೇಷಗಳು ರಸ್ತೆಯಲ್ಲಿ ಬಿದ್ದು ಹೋಗಿದ್ದವು. ಪ್ರಕರಣದಲ್ಲಿ ಭಾಗಿಯಾದ ಹೊಂಡ ಆಕ್ಟಿವಾ ಹಾಗೂ ಸ್ವಿಫ್ಟ್‌ ಕಾರನ್ನು ವಶಪಡಿಸಿಕೊಂಡಿದ್ದೇವೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಒಟ್ಟು 4 ತಂಡಗಳನ್ನು ರಚಿಸಿ, ವಿವಿಧ ಅಯಾಮಗಳಲ್ಲಿ ತನಿಖೆಯನ್ನು ನಡೆಸಿದ್ದರು.

Edited By : Shivu K
PublicNext

PublicNext

30/06/2025 07:47 pm

Cinque Terre

14.2 K

Cinque Terre

3

ಸಂಬಂಧಿತ ಸುದ್ದಿ