ಭೋಪಾಲ: ಮಧ್ಯಪ್ರದೇಶದ ಇಂದೋರ್ನ ನಂದಲಾಲ್ಪುರ ಪ್ರದೇಶದಲ್ಲಿ ಒಂದು ಪ್ರಮುಖ ವಿವಾದ ಭುಗಿಲೆದ್ದಿದೆ. ಕೆಲವು ಮುಸ್ಲಿಂ ಟ್ರಾನ್ಸ್ಜೆಂಡರ್ ವ್ಯಕ್ತಿಗಳು ತಮ್ಮನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ ಮತ್ತು 60ಕ್ಕೂ ಹೆಚ್ಚು ಜನರಿಗೆ ಎಚ್ಐವಿ ಚುಚ್ಚುಮದ್ದು ನೀಡಿದ್ದಾರೆ ಎಂದು ಹಿಂದೂ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಗುಂಪೊಂದು ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಹಿಂದೂ ಟ್ರಾನ್ಸ್ಜೆಂಡರ್ ಗುಂಪಿನ ನಾಯಕಿ ಸಕೀನಾ ಗುರು, 'ಪಾಯಲ್ ಅಲಿಯಾಸ್ ನಯೀಮ್ ಅನ್ಸಾರಿ ಮತ್ತು ಸೀಮಾ ಹಾಜಿ ಅಲಿಯಾಸ್ ಫರ್ಜಾನಾ ಸೇರಿದಂತೆ ಮಾಲೆಗಾಂವ್ನ ಮುಸ್ಲಿಂ ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಇತರರನ್ನು ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ. ನಿರಾಕರಿಸಿದವರಿಗೆ ಕಲುಷಿತ ಸಿರಿಂಜ್ಗಳನ್ನು ಚುಚ್ಚಲಾಯಿತು. ಇದರ ಪರಿಣಾಮವಾಗಿ ಸುಮಾರು 60 ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಅಸ್ವಸ್ಥರಾಗಿದ್ದಾರೆ. ಸಮುದಾಯದ ಅನೇಕರು ಭಯದಿಂದಾಗಿ ಓಡಿಹೋಗಿದ್ದಾರೆ ಅಥವಾ ಆರೋಪಿ ಗುಂಪನ್ನು ಸೇರಿದ್ದಾರೆ ಎಂದು ದೂರಿದ್ದಾರೆ.
ಎರಡು ಗುಂಪುಗಳ ನಡುವಿನ ವಿವಾದ ಹಲವು ಬಾರಿ ಪೊಲೀಸ್ ಠಾಣೆಗಳನ್ನು ತಲುಪಿದೆ. ಪರಿಸ್ಥಿತಿಯನ್ನು ಶಾಂತಗೊಳಿಸಲು ಅಧಿಕಾರಿಗಳು ಮಧ್ಯಪ್ರವೇಶಿಸಬೇಕಾಯಿತು. ಸೀಮಾ ಗುಂಪಿನ ಸದಸ್ಯರ ವಿರುದ್ಧ ಚಂದನ್ ನಗರ ಮತ್ತು ವಿಜಯ್ ನಗರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ ಮತ್ತು ಅಪಹರಣಕ್ಕಾಗಿ ಎಫ್ಐಆರ್ ದಾಖಲಿಸಲಾಗಿದೆ.
PublicNext
16/07/2025 07:31 pm