", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1753522889-WhatsApp-Image-2025-07-26-at-3.11.22-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬೆಂಗಳೂರು ವಿಭಜನೆ ಮತ್ತು ಟನಲ್ ರಸ್ತೆಯ ಕುರಿತು ಬಿಜೆಪಿ ಬೆಂಗಳೂರು ಶಾಸಕರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು...Read more" } ", "keywords": "BBMP division, Greater Bengaluru Authority, scientific tunnel road decisions, Bengaluru development, Vijayendra statement, BJP opposition, Karnataka government, urban planning, infrastructure development, Bengaluru news ", "url": "https://dashboard.publicnext.com/node" }
ಬೆಂಗಳೂರು : ಬೆಂಗಳೂರು ವಿಭಜನೆ ಮತ್ತು ಟನಲ್ ರಸ್ತೆಯ ಕುರಿತು ಬಿಜೆಪಿ ಬೆಂಗಳೂರು ಶಾಸಕರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದದಲ್ಲಿ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಬಿ ವೈ ವಿಜಯೇಂದ್ರ, ಬಿಬಿಎಂಪಿ ವಿಭಜನೆ, ಅವೈಜ್ಞಾನಿಕ ಟನಲ್ ರಸ್ತೆಯ ತೀರ್ಮಾನ ಗಳು ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿಲ್ಲ, ಬೆಂಗಳೂರನ್ನು ಐದು ಭಾಗಗಳಾಗಿ ವಿಂಗಡಿಸಿ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ ,ಮುಂಬಯಿ ಸೇರಿ ದೇಶದ ಅನೇಕ ನಗರಗಳಲ್ಲಿ ಪ್ರಯೋಗ ಮಾಡಿ ಅದರಲ್ಲೂ ಫೇಲ್ಯೂರ್ ಆಗಿವೆ. ಅದೇ ಪ್ರಯತ್ನ ವನ್ನು ಬೆಂಗಳೂರಲ್ಲಿ ಕಾಂಗ್ರೆಸ್ ಸರ್ಕಾರ ಮಾಡಲು ಹೊರಟಿದೆ. ಅದಕ್ಕಾಗಿ ಇದನ್ನು ಬಿಜೆಪಿ ಬಲವಾಗಿ ವಿರೋಧ ಮಾಡುತ್ತಿದೆ, ಈ ಯೋಜನೆ ಗಳಿಗೆ ಆತುರಾತುರವಾಗಿ ಟೆಂಡರ್ ಕರೆಯುತ್ತಿರೋದು ಸರಿಯಲ್ಲ, ಸಾವಿರ ಸಾವಿರ ಮನೆಗಳು ಗೃಹ ಪ್ರವೇಶ ಮಾಡೋಕೆ ರೆಡಿ ಇದ್ದಾರೆ ಆದರೆ ಆ ಮನೆಗಳಿಗೆ ಇವತ್ತು ಎನ್ಓಸಿಗಳು ಸಿಗುತ್ತಿಲ್ಲ ಇದರ ಬಗ್ಗೆ ಸಿಎಂ ಆಗಲಿ, ಡಿಸಿಎಂ ಆಗಲಿ ಚಿಂತನೆ ಮಾಡಿಲ್ಲ ಅನೇಕ ಅವೈಜ್ಞಾನಿಕ ತೀರ್ಮಾನ ಮಾಡಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ಅಭಿವೃದ್ಧಿ ಪೂರಕವಾಗಿ ಇಲ್ಲದ ಯೋಜನೆ ಮಾಡಿದ್ದಾರೆ.ಅನೇಕ ರಾಜ್ಯದಲ್ಲಿ ವಿಫಲವಾಗಿರೋ ಪ್ರಾಜೆಕ್ಟ್ ಇಲ್ಲಿ ಮತ್ತೆ ಮುಂದುವರೆಸಿದ್ದಾರೆ, ಬ್ಲಾಕ್ ಲಿಸ್ಟ್ ಕಂಪನಿಯನ್ನ ಸೇರಿಸಿಕೊಂಡು ಅತುರವಾಗಿ ಮಾಡಲು ಹೊರಟಿದ್ದಾರೆ ಇದರ ಹಿಂದಿನ ಉದ್ದೇಶ ಏನು ಅಂತ ತಿಳಿಸಬೇಕು ಹೀಗಾಗಿ ಇವತ್ತು ಅನೇಕ ವಿಚಾರವಾಗಿ ನಾವು ಇಂದು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
PublicNext
26/07/2025 03:12 pm