ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: 4 ತಿಂಗಳ ಜೈಲುವಾಸ, 24 ದಿನಗಳ ಕಾಯುವಿಕೆ: 'ಮಾಸ್ಕ್ ಮ್ಯಾನ್' ಬುರುಡೆ ಚಿನ್ನಯ್ಯಗೆ ಕೊನೆಗೂ ಬಿಡುಗಡೆ!

ಶಿವಮೊಗ್ಗ: ಜಾಮೀನು ಮಂಜೂರಾಗಿ ಬರೋಬ್ಬರಿ 24 ದಿನಗಳ ಬಳಿಕ, 'ಮಾಸ್ಕ್ ಮ್ಯಾನ್' ಎಂದೇ ಗುರುತಿಸಿಕೊಂಡಿದ್ದ ಚಿನ್ನಯ್ಯ ಅಲಿಯಾಸ್‌ ಬುರುಡೆ ಚಿನ್ನಯ್ಯಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಇಂದು ಬೆಳಗ್ಗೆ ಆತನ ಪತ್ನಿ, ಸಹೋದರಿ ಹಾಗೂ ವಕೀಲರು ಜೈಲಿಗೆ ತೆರಳಿ ಚಿನ್ನಯ್ಯನನ್ನು ಕರೆದೊಯ್ದರು.

'ಮಾಸ್ಕ್ ಮ್ಯಾನ್' ಪ್ರಕರಣದ ಹಿನ್ನೆಲೆ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪ್ರತ್ಯಕ್ಷನಾಗಿದ್ದ. ಮಾಸ್ಕ್‌ ಧರಿಸಿ, ತನಿಖಾ ತಂಡಕ್ಕೆ ಶವಗಳನ್ನು ಹೂತಿಟ್ಟ ಜಾಗಗಳನ್ನು ತೋರಿಸುತ್ತಿದ್ದ. ಆದರೆ, ಈತ ತಿಳಿಸಿದ ಯಾವುದೇ ಕಡೆಗಳಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗದ ಹಿನ್ನೆಲೆಯಲ್ಲಿ, 'ಮಾಸ್ಕ್ ಮ್ಯಾನ್' ಅಲಿಯಾಸ್‌ ಚಿನ್ನಯ್ಯನನ್ನು ಪೊಲೀಸರು ಬಂಧಿಸಿದ್ದರು. ಬೆಳ್ತಂಗಡಿ ನ್ಯಾಯಾಲಯದಲ್ಲಿ ಈತನ ವಿಚಾರಣೆ ನಡೆಯುತ್ತಿತ್ತು. ಸುರಕ್ಷತೆಯ ದೃಷ್ಟಿಯಿಂದ ಬುರುಡೆ ಚಿನ್ನಯ್ಯನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಜಾಮೀನು ಮಂಜೂರಾದರೂ ಬಿಡುಗಡೆ ವಿಳಂಬ

ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ನವೆಂಬರ್ 24ರಂದು 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, ಜಾಮೀನು ಬಾಂಡ್ ಮತ್ತು ಶೂರಿಟಿ ನೀಡಲು ಯಾರೂ ಮುಂದೆ ಬಾರದ ಕಾರಣ, ಆತನ ಬಿಡುಗಡೆ ಸಾಧ್ಯವಾಗಿರಲಿಲ್ಲ. ಬುಧವಾರ ಆತನ ಪತ್ನಿ ಮಲ್ಲಿಕಾ ಅವರು ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರು ಜಾಮೀನುದಾರರಿಂದ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಶೂರಿಟಿ ಕೊಡಿಸಿ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು.

ಬಿಡುಗಡೆಗೆ ತಡವಾಗಿದ್ದು ಏಕೆ?

ಬುರುಡೆ ಚಿನ್ನಯ್ಯ ಬುಧವಾರ ಸಂಜೆಯೇ ಬಿಡುಗಡೆಯಾಗಬೇಕಿತ್ತು. ಆದರೆ, ದಕ್ಷಿಣ ಕನ್ನಡದಿಂದ ಆತನ ಪತ್ನಿ ಮಲ್ಲಿಕಾ ಅವರು ಬರುವುದು ತಡವಾಗಿತ್ತು. ಕೇಂದ್ರ ಕಾರಾಗೃಹದಿಂದ ಸಂಜೆ 6.30ರ ಬಳಿಕ ಯಾವುದೇ ಕೈದಿಯನ್ನು ಬಿಡುಗಡೆ ಮಾಡಲು ಅವಕಾಶವಿಲ್ಲ. ಈ ಕಾರಣದಿಂದಾಗಿ, ಚಿನ್ನಯ್ಯನನ್ನು ಇಂದು ಬೆಳಗ್ಗೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

Edited By :
PublicNext

PublicNext

18/12/2025 11:08 am

Cinque Terre

6.33 K

Cinque Terre

0

ಸಂಬಂಧಿತ ಸುದ್ದಿ