ಹರಪನಹಳ್ಳಿ : ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಗಡಿ ಗ್ರಾಮಕ್ಕೆ ರಸ್ತೆ ಗ್ರಾಮಕ್ಕೆ ರಸ್ತೆಯೇ ಇಲ್ಲದಂತಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರೋ ಪುಣ್ಯಾನಗರ ಗ್ರಾಮದ ಜನರ ಗೋಳಿನ ಕಥೆ ಕೇಳೋರೇ ಇಲ್ಲದಂತಾಗಿದೆ.
ಗ್ರಾಮೀಣ ಭಾಗದಲ್ಲಿ ರಸ್ತೆ, ನೀರು, ಮೂಲ ಸೌಕರ್ಯಕ್ಕಾಗಿ ರಾಜ್ಯ ಸರ್ಕಾರ ಕೋಟಿ, ಕೋಟಿ ಖರ್ಚು ಮಾಡುತ್ತೆ. ಆದ್ರೆ, ಕೇವಲ ಎರಡು ಕಿಮೀ ರಸ್ತೆಗಾಗಿ, ಡಿಸಿ, ಶಾಸಕರ ಬಳಿ ಅಲೆದಾಡಿದ್ರು ನ್ಯಾಯ ಸಿಗುತ್ತಿಲ್ಲ. ನಮಗೆ ಹಣ ಕೋಡೋದು ಬೇಡ, ಏನೂ ಬೇಡ, ಆದ್ರೆ ನಮಗೆ ರಸ್ತೆ ಮಾಡಿ ಕೊಡಿ ಅಂತ, ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದ್ರೂ ಉಪಯೋಗವಿಲ್ಲ ಅಂತ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
PublicNext
21/01/2026 04:29 pm
LOADING...