ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಲೂರು: ಹಿರೇಹಾಸಡೆ ಗ್ರಾಮದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಅಟ್ಟಹಾಸ - ಅಡಿಕೆ ತೋಟ ಸಂಪೂರ್ಣ ನಾಶ

ಬೇಲೂರು: ತಾಲ್ಲೂಕಿನ ಹಿರೇಹಾಸಡೆ ಗ್ರಾಮದ ರೈತರು ಕಾಡಾನೆಗಳ ದಾಳಿಗೆ ತತ್ತರಿಸಿ ಹೋಗಿದ್ದಾರೆ. ಸುಮಾರು 22 ರಿಂದ 28 ಆನೆಗಳಿರುವ ಬೃಹತ್ ಹಿಂಡು ಗ್ರಾಮದ ತೋಟಗಳಿಗೆ ನುಗ್ಗಿ ಬೆಳೆದು ನಿಂತಿದ್ದ ಅಡಿಕೆ ಮತ್ತು ಕಾಫಿ ಗಿಡಗಳನ್ನು ಧ್ವಂಸಗೊಳಿಸಿವೆ. ಕಳೆದ ಕೆಲವು ದಿನಗಳಿಂದ ಹಿರೇಹಾಸಡೆ ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು, ರೈತ ಶರತ್ ಕುಮಾರ್ ಸಿ.ಜಿ. ಅವರಿಗೆ ಸೇರಿದ ತೋಟದ ಮೇಲೆ ದಾಳಿ ನಡೆಸಿವೆ.

ರಾತ್ರಿ ಹಾಗೂ ಹಗಲು ಎನ್ನದೆ ತೋಟದಲ್ಲಿ ಬೀಡುಬಿಟ್ಟಿರುವ ಆನೆಗಳು, ನೂರಾರು ಅಡಿಕೆ ಮರಗಳನ್ನು ಕಿತ್ತು ಹಾಕಿವೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಬೆಳೆ ಕೈಗೆ ಬರುವ ಸಮಯದಲ್ಲಿ ಮಣ್ಣುಪಾಲಾಗುತ್ತಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.

Edited By : Shivu K
PublicNext

PublicNext

27/01/2026 10:01 pm

Cinque Terre

17.36 K

Cinque Terre

0

ಸಂಬಂಧಿತ ಸುದ್ದಿ