ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ​ಭಾರಿ ಗಾಳಿ, ಮಳೆಗೆ ಹೊಸನಗರದಲ್ಲಿ ಮನೆ ಮೇಲೆ ಬಿದ್ದ ತೆಂಗಿನಮರ; ಐವರು ಪಾರು

​ಶಿವಮೊಗ್ಗ: ಜಿಲ್ಲೆಯಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಇಂದು ಸಂಜೆ ಭಾರಿ ಮಳೆಯಾಗಿದೆ. ಮಳೆಯೊಂದಿಗೆ ಬೀಸಿದ ವೇಗವಾದ ಗಾಳಿಯಿಂದಾಗಿ ಅವಾಂತರಗಳು ಸಂಭವಿಸಿವೆ.

​ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಭಾರಿ ಗಾಳಿಗೆ ಸಿಲುಕಿ ರತ್ನಮ್ಮ ಎಂಬುವವರ ಹಂಚಿನ ಮನೆಯ ಮೇಲೆ ಬೃಹತ್ ತೆಂಗಿನಮರ ಉರುಳಿ ಬಿದ್ದಿದೆ. ಮರ ಬೀಳುವ ಸಂದರ್ಭದಲ್ಲಿ ಮನೆಯೊಳಗೆ ಐವರು ಸದಸ್ಯರಿದ್ದರು. ಅದೃಷ್ಟವಶಾತ್ ಎಲ್ಲರೂ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​​ಮರ ಬಿದ್ದ ರಭಸಕ್ಕೆ ಹಂಚಿನ ಮನೆಗೆ ತೀವ್ರ ಹಾನಿಯಾಗಿದೆ.

​ಮರ ಬಿದ್ದ ನಂತರ ಸುರಿದ ಮಳೆಯಿಂದಾಗಿ ಮನೆಯೊಳಗೆಲ್ಲ ನೀರು ನುಗ್ಗಿ ಸಾಮಗ್ರಿಗಳಿಗೆ ಹಾನಿಯಾಗಿದೆ.

Edited By :
PublicNext

PublicNext

15/03/2026 10:17 pm

Cinque Terre

22.17 K

Cinque Terre

0

ಸಂಬಂಧಿತ ಸುದ್ದಿ