ಮೈಸೂರು:- ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ನಾಶವಾಗಿದೆ. ಈ ಘಟನೆ ಹೆಚ್.ಡಿ ಕೋಟೆ ತಾಲ್ಲೂಕಿನ ಕೂಸೆಗೌಡಹುಂಡಿ ಬಳಿ ನಡೆದಿದೆ.
ಗುಜರಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟನೆಯ ಹೊಗೆ ಆವರಿಸಿತ್ತು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಲು ಮುಂದಾದರು. ಬೆಂಕಿಯಿಂದ ಕೆಲಕಾಲ ಸಾರ್ವಜನಿಕರು ಆತಂಕದಲ್ಲಿದ್ದು ಬೆಂಕಿ ನಂದಿಸಿದ ಬಳಿಕ ನಿಟ್ಟುಸಿರು ಬಿಟ್ಟರು.
PublicNext
27/03/2026 11:45 am
LOADING...