ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪ - ಮಗನ ಬಾಂಧವ್ಯಕ್ಕೆ ಮನಸೋತ ಪ್ರೇಕ್ಷಕರು..!

ಬೆಂಗಳೂರು: ನಮ್ ಪಾಪ್ ಕಾರ್ನ್ ಸಿನಿಮಾ ಬ್ಯಾನರ್ ಅಡಿಯಲ್ಲಿ, ಆರ್ಯನ್ ತೇಜಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಹೊಸ ಪ್ರಯೋಗಾತ್ಮಕ ಚಿತ್ರ “ನಾನು ಕರುಣಾಕರ” ಇದೀಗ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ನಿರ್ದೇಶಕ ಆರ್ಯನ್ ತೇಜಸ್ ಸ್ವತಃ ನಾಯಕನಾಗಿ ಕಾಣಿಸಿಕೊಂಡಿದ್ದು, ಭಾರ್ಗವಿ LLB ಖ್ಯಾತಿಯ ರಾಧ ಭಗವತಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ಚಿತ್ರ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಥೆಯಲ್ಲಿನ ನೈಜತೆ, ಭಾವನಾತ್ಮಕ ಸನ್ನಿವೇಶಗಳು ಮತ್ತು ಹೊಸತಾದ ನಿರೂಪಣಾ ಶೈಲಿ ಜನರಿಗೆ ತುಂಬಾ ಇಷ್ಟವಾಗಿದೆ. ವಿಶೇಷವಾಗಿ ನಾಯಕನ ಅಭಿನಯ ಮತ್ತು ರಾಧ ಭಗವತಿಯ ಪಾತ್ರದ ಆಳವು ಸಿನಿಪ್ರಿಯರನ್ನು ಸ್ಪರ್ಶಿಸಿದೆ.

“ನಾನು ಕರುಣಾಕರ” ಕೇವಲ ಮನರಂಜನೆ ನೀಡುವ ಚಿತ್ರವಲ್ಲ, ಜೀವನದ ನಿಜವಾದ ಅರ್ಥವನ್ನು ತೋರಿಸುವ ಪ್ರಯತ್ನವಾಗಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಾರೆ, ಈ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಒಂದು ವಿಭಿನ್ನ ಅನುಭವವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.

Edited By : Somashekar
PublicNext

PublicNext

03/04/2026 02:06 pm

Cinque Terre

18.32 K

Cinque Terre

1