ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

​ಹೊಸ ಕಾಶ್ಮೀರದ ಯುವಜನರ ಕೈಯಲ್ಲಿ ಈಗ ಕಲ್ಲಿನ ಬದಲಿಗೆ ಪೆನ್ನುಗಳಿವೆ: ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ

​ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370 ಅನ್ನು ರದ್ದುಗೊಳಿಸಿದ ನಂತರ ಕಣಿವೆಯಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಹೊಸ ಯುಗ ಆರಂಭವಾಗಿದೆ ಎಂದು ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅಭಿಪ್ರಾಯ ಪಟ್ಟಿದ್ದಾರೆ.

ಶ್ರೀನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬದಲಾಗುತ್ತಿರುವ ಕಾಶ್ಮೀರದ ವಾಸ್ತವ ಸ್ಥಿತಿಯನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಿದರು.

​ಒಂದು ಕಾಲದಲ್ಲಿ ಕಾಶ್ಮೀರದ ಯುವಜನತೆ ಮತ್ತು ಮಕ್ಕಳು ದಾರಿ ತಪ್ಪಿ ಕೈಯಲ್ಲಿ ಕಲ್ಲುಗಳನ್ನು ಹಿಡಿದು ಪ್ರತಿಭಟನೆ ಮತ್ತು ಹಿಂಸಾಚಾರದಲ್ಲಿ ತೊಡಗುತ್ತಿದ್ದರು.

ಆದರೆ, ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ವಿಧಿ 370 ರದ್ದತಿಯ ನಂತರ ರೂಪುಗೊಂಡಿರುವ ಈ 'ಹೊಸ ಕಾಶ್ಮೀರ'ದಲ್ಲಿ ಮಕ್ಕಳ ಕೈಯಲ್ಲಿ ಕಲ್ಲುಗಳ ಬದಲಿಗೆ ಪೆನ್ನುಗಳು ರಾರಾಜಿಸುತ್ತಿವೆ. ಯುವ ಪೀಳಿಗೆಯು ಹಿಂಸೆಯನ್ನು ತ್ಯಜಿಸಿ ಶಿಕ್ಷಣ ಮತ್ತು ಪ್ರಗತಿಯತ್ತ ಮುಖ ಮಾಡಿರುವುದು ಈ ಭಾಗದ ದೊಡ್ಡ ಬದಲಾವಣೆಯಾಗಿದೆ ಎಂದು ಅವರು ಶ್ಲಾಘಿಸಿದರು.

​ಕಾಶ್ಮೀರದ ಯುವಜನತೆ ಈಗ ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದಾರೆ ಮತ್ತು ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಕಣಿವೆಯಲ್ಲಿ ನೆಲೆಸುತ್ತಿರುವ ಈ ಶಾಂತಿ ಮತ್ತು ಶೈಕ್ಷಣಿಕ ಕ್ರಾಂತಿಯು ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದೆ ಎಂದು ಇಮಾಮ್ ಇಲ್ಯಾಸಿಯವರು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದರು.

Edited By : Vijay Kumar
PublicNext

PublicNext

03/04/2026 06:59 pm

Cinque Terre

34.35 K

Cinque Terre

2