ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಕಾಡಂಡದಲ್ಲಿ ಕೃಷಿ ತೋಟಕ್ಕೆ ನುಗ್ಗಿದ ಒಂಟಿ ಸಲಗ- ಅಪಾರ ಹಾನಿ

ಬೆಳ್ತಂಗಡಿ: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕಾಡಂಡ ಪರಿಸರದಲ್ಲಿ ಒಂಟಿ ಸಲಗವೊಂದು ಕೃಷಿ ತೋಟಗಳಿಗೆ ದಾಳಿ ಮಾಡಿ ಅಪಾರ ಹಾನಿ ಉಂಟುಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಇಲ್ಲಿನ ಕಾಡಂಡ ಪರಿಸರದ ಪ್ರಶಾಂತ್ ಹಾಗೂ ಮುತ್ತಪ್ಪ ಎಂಬವರ ತೋಟಗಳಿಗೆ ಈ ಒಂಟಿ ಸಲಗ ನುಗ್ಗಿದೆ. ಈ ವೇಳೆ ಈ ಕಾಡಾನೆಯು ನೀರಾವರಿ ಪೈಪ್ ಲೈನ್, ತೋಟದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ, 50ಕ್ಕೂ ಅಧಿಕ ಬಾಳೆ ಗಿಡಗಳಿಗೆ ಹಾನಿ ಉಂಟು ಮಾಡಿದೆ. ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.

Edited By : Somashekar
PublicNext

PublicNext

04/04/2026 03:51 pm

Cinque Terre

12.68 K

Cinque Terre

0