ರಾಯಚೂರು ಜಿಲ್ಲೆಯ ಹಿರೇದಿನ್ನಿ ಗ್ರಾಮದಲ್ಲಿ ಇಂದು ಸಂಜೆ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿಯುವ ವೇಳೆ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಗ್ರಾಮದ ನಡು ಬೀದಿಯಲ್ಲಿದ್ದ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಸಂಪೂರ್ಣವಾಗಿ ಸುಟ್ಟು ಕರಕಾಗಿದೆ. ರಾಯಚೂರು ಜಿಲ್ಲೆಯ ಹಿರೇದಿನ್ನಿ ಗ್ರಾಮದಲ್ಲಿ ಇಂದು ಸಂಜೆ ಗುಡುಗು ಮಿಂಚು ಸಹಿತ ಮಳೆ ಸುರಿಯುವ ವೇಳೆ ತೆಂಗಿನ ಮರಕ್ಕೆ ಸಿಡಿಲು ಬಡಿದು ಸಂಪೂರ್ಣ ಭಸ್ಮವಾಗಿದೆ.
ಘಟನೆ ಸೆರೆಹಿಡಿದ ಗ್ರಾಮಸ್ಥರು
ಸಿಡಿಲಿನ ಹೊಡೆತಕ್ಕೆ ಸಿಲುಕಿ ತೆಂಗಿನ ಮರ ಸುಟ್ಟು ಹೋಗುತ್ತಿದ್ದ ದೃಶ್ಯವನ್ನು ಕಂಡ ಗ್ರಾಮಸ್ಥರು ಕೆಲಕಾಲ ಭಯಭೀತರಾಗಿದ್ದರು. ಈ ವಿಶಿಷ್ಟ ಮತ್ತು ಆತಂಕಕಾರಿ ಕ್ಷಣವನ್ನು ಹಲವು ಗ್ರಾಮಸ್ಥರು ತಮ್ಮ ಮೊಬೈಲ್ ಫೋನ್ಗಳಲ್ಲಿ ಸೆರೆ ಹಿಡಿದಿದ್ದಾರೆ.
PublicNext
22/04/2026 08:19 am
LOADING...