ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಟ್ಟಿಹಳ್ಳಿ: ಕುಮುದ್ವತಿ ನದಿ ದಂಡೆಗೆ ಆವರಿಸಿದ ಬೆಂಕಿ : 450 ಎಕರೆ ಜಮೀನು ಭಸ್ಮ!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕುಮುದ್ವತಿ ನದಿ ದಂಡೆಯ ಮೇಲಿನ ಜಮೀನುಗಳಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಕುಡಪಲಿ ಗ್ರಾಮದ ಬಳಿಯ ಕುಮುದ್ವತಿ ನದಿ ದಂಡೆಯಲ್ಲಿ ಒಣ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ, ಜ್ವಾಲೆಗಳು ವ್ಯಾಪಕವಾಗಿ ಹರಡಿವೆ.

ಈ ಅಗ್ನಿ ದುರಂತದಲ್ಲಿ ನದಿ ದಂಡೆಯ ಮೇಲಿದ್ದ ರೈತರ ಸುಮಾರು ೪೫೦ ಎಕರೆ ಜಮೀನು ಹಾಗೂ ಕೋಟ್ಯಾಂತರ ರೂಪಾಯಿ ಮೌಲ್ಯದ ತೆಂಗು, ನೆರಳೆ ಸೇರಿದಂತೆ ವಿವಿಧ ಜಾತಿಯ ಮರಗಿಡಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಯ ಕೆನ್ನಾಲಿಗೆಗೆ ಅಪಾರ ಪ್ರಮಾಣದ ಸಂಪತ್ತು ಕ್ಷಣಾರ್ಧದಲ್ಲಿ ಭಸ್ಮವಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.

Edited By :
PublicNext

PublicNext

28/04/2026 08:41 pm

Cinque Terre

24.05 K

Cinque Terre

0

ಸಂಬಂಧಿತ ಸುದ್ದಿ