ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ಗಾಂಧಿನಗರ ಶಾಸಕರೂ ಆದ ದಿನೇಶ್ ಗುಂಡೂರಾವ್ ಅವರು ಇಂದು ಹೋಮ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಕ್ಷೇತ್ರದ ಜನರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದರು. ಅಂದಹಾಗೆ, ಶೇಷಾದ್ರಿಪುರಂನ ಆರ್.ಕೆ.ಸ್ಟ್ರೀಟ್ ನ ಶಿರೂರು ಪಾರ್ಕ್ ರಸ್ತೆಯ ಬಳಿ ಇರುವ ಬಲಮುರಿ ಗಣೇಶ ದೇವಸ್ಥಾನದ ಕುಂಭಾಭಿಷೇಕ ಮತ್ತು ಲೀಲಾಕ್ಸ್ ಅಸೋಸಿಯೇಷನ್ ನ 55ನೇ ವರ್ಷದ ಶ್ರೀ ಅಣ್ಣಮ್ಮದೇವು ಮಹೋತ್ಸವ ಹಿನ್ನೆಲೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವರು, ಪೂರ್ಣಾಹುತಿ ಕೈಂಕರ್ಯವನ್ನು ಪೂರ್ಣಗೊಳಿಸಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
PublicNext
30/04/2026 07:35 am
LOADING...