ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷ್ಣಾ ನದಿ ದಡದಲ್ಲಿ ಆಟವಾಡುತ್ತಿದ್ದ 7 ವರ್ಷದ ಪ್ರಣವ್ ಎಂಬ ಬಾಲಕ ನೀರುಪಾಲು

ರಾಯಬಾಗ : ಕೃಷ್ಣಾ ನದಿಯಲ್ಲಿ ಆಟವಾಡುತ್ತಿದ್ದ ವೇಳೆ ಏಳು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ರಾಯಬಾಗ ತಾಲೂಕಿನ ಶಿರಗೂರು ಸಮೀಪ ಸಂಭವಿಸಿದೆ.

ಪ್ರಣವ ಸುನೀಲ ಕಾಂಬಳೆ (7) ವರ್ಷದ ಮೃತ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ. ಆತನು ಮೂಲತಃ ಉಗಾರ ಖುರ್ದ ನಿವಾಸಿಯಾಗಿದ್ದು, ಪ್ರಸ್ತುತ ತಾಯಿಯ ಜೊತೆ ಶಿರಗೂರಿನಲ್ಲಿ ವಾಸವಾಗಿದ್ದ ಎನ್ನಲಾಗಿದೆ.ಮೇ 31ರ ಭಾನುವಾರ ಬೆಳಿಗ್ಗೆ ಬಾಲಕನ ತಾಯಿ ಪೂಜಾ ಬಟ್ಟೆ ತೊಳೆಯಲೆಂದು ಕೃಷ್ಣಾ ನದಿಗೆ ತೆರಳಿದ್ದ ವೇಳೆ, ತಾಯಿಯೊಂದಿಗೆ ಹೋಗಿದ್ದ ಪ್ರಣವ ನದಿಯ ನೀರಿನಲ್ಲಿ ಆಟವಾಡುತ್ತಿದ್ದನು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ.

ಮಗನನ್ನು ಉಳಿಸಲು ತಾಯಿಯೂ ಕೂಡ ನೀರಿಗೆ ಹಾರಿದ್ದಾಳೆ. ವಿಷಯ ತಿಳಿದ ಕೂಡಲೇ ಕುಟುಂಬಸ್ಥರು, ಗ್ರಾಮಸ್ಥರು ಬಂದು ಪೂಜಾಳನ್ನು ಮೇಲಕ್ಕತ್ತುವ ವೇಳೆಯಲ್ಲಿ ಪ್ರಜ್ಞಾಹೀನಾವಸ್ಥೆಯಲ್ಲಿದ್ದಳು. ಸದ್ಯ ಕುಡಚಿ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಬಾಲಕನ ಶವ ನದಿಯಲ್ಲಿ ಪತ್ತೆಯಾಗಿದೆ. ನೀರಿನಲ್ಲಿ ಮುಳುಗಿದ್ದರಿಂದಲೇ ಬಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ವರದಿ: ಚಿದಾನಂದ ಐಹೊಳೆ ಪಬ್ಲಿಕ್ ನೆಕ್ಸ್ಟ್ ರಾಯಬಾಗ

Edited By : Shivu K
PublicNext

PublicNext

01/06/2026 09:09 pm

Cinque Terre

15.93 K

Cinque Terre

0

ಸಂಬಂಧಿತ ಸುದ್ದಿ