ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗಿ ಸರ್ಕಾರದಿಂದ ಆಧ್ಯಾತ್ಮಿಕ ಸ್ಪರ್ಶ: ಫಝೀಲಾ ನಗರಕ್ಕೆ ' ಮಹಾವೀರ್ ನಗರ್ ಎಂದು ಘೋಷಣೆ

ಲಕ್ನೋ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಫಝೀಲಾ ನಗರ ಇನ್ನು ಮುಂದೆ 'ಮಹಾವೀರ್‌ ನಗರ್‌' ಆಗಲಿದೆ ಎಂದು ಮರುನಾಮಕರಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಭಗವಾನ್ ಮಹಾವೀರರ ಗೌರವಾರ್ಥವಾಗಿ, ಫಝೀಲಾ ನಗರವನ್ನು 'ಪಾವಗರ್‌' ಎಂದು ಮರುನಾಮಕರಣ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ಸಿಎಂ ಯೋಗಿ ಪ್ರಕಟಿಸಿದ್ದಾರೆ.

ಕುಶಿನಗರದಲ್ಲಿ 424 ಕೋಟಿ ರೂ.ಗೂ ಹೆಚ್ಚು ಮೌಲ್ಯದ 278 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಇದನ್ನು ಇನ್ನು ಮುಂದೆ ಫಝೀಲಾ ನಗರ ಎಂದು ಕರೆಯದೆ, ಪಾವಗಢ ಎಂದು ಗುರುತಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಫಝೀಲಾ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರಸ್ತುತ ಬಿಜೆಪಿ ಶಾಸಕ ಸುರೇಂದ್ರ ಕುಶ್ವಾಹ ಪ್ರತಿನಿಧಿಸುತ್ತಿದ್ದು, 2012 ಮತ್ತು 2017ರಲ್ಲಿ ಬಿಜೆಪಿ ಶಾಸಕಿ ಗಂಗಾ ಕುಶ್ವಾಹ ಕೂಡ ಇಲ್ಲಿಂದಲೇ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಆದಿತ್ಯನಾಥ್, 2022ಕ್ಕೂ ಮೊದಲು ತಮ್ಕುಹಿರಾಜ್ ಮತ್ತು ಫಝೀಲಾ ನಗರದಂತಹ ಪ್ರದೇಶಗಳು ಅಭಿವೃದ್ಧಿಯತ್ತ ಗಮನ ಸೆಳೆಯುವ ಬದಲು ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದವು ಎಂದು ಟೀಕಿಸಿದರು.

ಸ್ಥಳೀಯ ಪ್ರತಿನಿಧಿಗಳ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿ ಯೋಗಿ, ಪ್ರದೇಶದ ಶಾಸಕರು ಮತ್ತು ಸಂಸದರ ಸಂಘಟಿತ ಪ್ರಯತ್ನಗಳಿಂದಾಗಿ ಜನರ ಬೇಡಿಕೆಗಳು ಈಡೇರುತ್ತಿವೆ ಎಂದು ತಿಳಿಸಿದರು.

Edited By :
PublicNext

PublicNext

02/06/2026 08:27 pm

Cinque Terre

9.49 K

Cinque Terre

1

ಸಂಬಂಧಿತ ಸುದ್ದಿ