ಬಂಟ್ವಾಳ : ತಾಲೂಕು ಪೆರಾಜೆ ಗ್ರಾಮದ EX army KT ನಾಯ್ಕ್ ಅವರ ಮನೆಯಲ್ಲಿ JCB ಯಂತ್ರ ಬಳಸಿ ನೆಲ ಸಮತಟ್ಟುಗೊಳಿಸುವ ಕಾರ್ಯ ನಡೆಯುತ್ತಿದ್ದಾಗ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದ ತಾಯಿ ನಾಗರಹಾವು ಸಾವನ್ನಪ್ಪಿದೆ. ನಂತರ, ಆಳವಾದ ಪರಿಶೀಲನೆ ನಡೆಸಿದಾಗ, ತಾಯಿಯೊಂದಿಗೆ ಮರಿಗಳೂ ಇದ್ದದ್ದು ಪತ್ತೆಯಾಗಿದೆ.
ಸಾವನ್ನಪ್ಪಿದ ತಾಯಿ ನಾಗರಹಾವಿನೊಂದಿಗೆ ಪತ್ತೆಯಾದ 26 ಮರಿಗಳನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ.*ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ RFO ಸುನೀಲ್ ಡಿಸೋಜಾ, DYFO ರವಿ, FG ದಯಾನಂದ್, ರಾಘವ ಹಾಗೂ ವರ ಮಹತಿ ಭಾಗವಹಿಸಿ, ಮರಿಗಳನ್ನು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
PublicNext
02/06/2026 08:55 pm
LOADING...