ಬೆಂಗಳೂರು: ಇಂದು ವಿಧಿವಶರಾದ ಇಂದಿರಾ ಲಂಕೇಶ್ ಅವರ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರು ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ವೊಂದನ್ನು ಹಾಕಿರುವ ಖ್ಯಾತ ಪತ್ರಕರ್ತ ದಿ.ಪಿ.ಲಂಕೇಶ್ ಅವರ ಧರ್ಮಪತ್ನಿ ಇಂದಿರಾ ಲಂಕೇಶ್ ಅವರು ತಮ್ಮ ಪತಿಯ ಸಾಧನೆಗಳಿಗೆ ಬೆನ್ನೆಲುಬಾಗಿದ್ದರು ಎಂದಿದ್ದಾರೆ. ಮಾತ್ರವಲ್ಲ ಇಂದಿರಾ ಲಂಕೇಶ್ ಅವರು ಇಂದಿನ ಎಲ್ಲ ಹೆಣ್ಣು ಮಕ್ಕಳು ಸೇರಿದಂತೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಅಂತಾ ಬಣ್ಣಿಸಿದ್ದಾರೆ.
PublicNext
15/06/2026 03:04 pm
LOADING...