ಶಿವಮೊಗ್ಗ : ಮುಂಗಾರು ಮಳೆ ತೀವ್ರ ಕ್ಷೀಣಿಸಿದ್ದು, ಕೃಷಿ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿದೆ. ಜಿಲ್ಲಾಡಳಿತದ ವರದಿ ಪ್ರಕಾರ ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಅತ್ಯಂತ ಕನಿಷ್ಠ ಪ್ರಮಾಣದ ಮಳೆಯಾಗಿದೆ. ಸರಾಸರಿ ಲೆಕ್ಕದಲ್ಲಿ ಒಂದು ಮಿ.ಮೀ.ಗಿಂತಲು ಕಡಿಮೆ ಮಳೆಯಾಗಿದೆ. ಜೂನ್ 16ರ ಬೆಳಗ್ಗೆ 8:30ರಿಂದ ಜೂನ್ 17ರ ಬೆಳಗ್ಗೆ 8:30ರವರೆಗಿನವರದಿಯಂತೆ ಜಿಲ್ಲೆಯಲ್ಲಿ ಬಿದ್ದ ಒಟ್ಟು ಸರಾಸರಿ ಮಳೆ ಕೇವಲ 0.90 ಮಿ.ಮೀ. ಅಲ್ಲದೆ ಜಿಲ್ಲೆಯಾದ್ಯಂತ ಒಣಹವೆ ಇದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗ, ಶಿಕಾರಿಪುರ, ಸೊರಬ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕುಗಳಲ್ಲಿ ಮಳೆಯ ಪ್ರಮಾಣ ಕೇವಲ 0.10 ಮಿ.ಮೀ ನಷ್ಟು ದಾಖಲಾಗಿದೆ. ಇನ್ನುಳಿದಂತೆ ಭದ್ರಾವತಿ ಹಾಗೂ ಸಾಗರ ತಾಲೂಕುಗಳಲ್ಲಿ ಪರಿಸ್ಥಿತಿ ಭಿನ್ನವೇನಿಲ್ಲ. ಈ ಎರಡೂ ತಾಲೂಕುಗಳಲ್ಲಿ ಕೇವಲ 0.20 ಮಿ.ಮೀ ನಷ್ಟು ಮಳೆ ಬಿದ್ದಿದೆ. ಜೂನ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ವಾಡಿಕೆ ಮಳೆ ಪ್ರಮಾಣ ಒಟ್ಟು 2356.80 ಮಿ.ಮೀ. ಆದರೆ ಈವರೆಗೆ ಕೇವಲ 492.10 ಮಿ.ಮೀ ಮಳೆಯಷ್ಟೇ ಸುರಿದಿದೆ.
Kshetra Samachara
17/06/2026 04:48 pm
LOADING...