ಉಡುಪಿ: ಹಿರಿಯಡ್ಕ ಸಮೀಪದ ಪಡ್ಡಂನ ಕೃಷಿ ಜಮೀನಿನಲ್ಲಿ ಅಪರೂಪದ ನೀರುನಾಯಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ರಾತ್ರಿ ವೇಳೆ ಸ್ಥಳೀಯ ರೈತ ರಾಘವೇಂದ್ರ ಅವರು ತಮ್ಮ ಭತ್ತದ ಗದ್ದೆಯನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದ ವೇಳೆ ಅಸಾಮಾನ್ಯ ಪ್ರಾಣಿಯೊಂದು ಕಾಣಿಸಿಕೊಂಡಿತು. ಗಮನಿಸಿದಾಗ ಅದು ನೀರುನಾಯಿ ಎಂಬುದು ತಿಳಿದುಬಂದಿದೆ.
ಗದ್ದೆಯಲ್ಲಿ ಕಾಣಿಸಿಕೊಂಡ ನೀರುನಾಯಿ ತಕ್ಷಣ ಅಲ್ಲಿಂದ ತೆರಳದೆ,ಮರುದಿನ ಬೆಳಗ್ಗೆಯೂ ಅದೇ ಪ್ರದೇಶದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂದಿದೆ. ಇದರಿಂದ ಸ್ಥಳೀಯರು ಹೆಚ್ಚಿನ ಕುತೂಹಲದಿಂದ ನೀರು ನಾಯಿಯನ್ನು ವೀಕ್ಷಿಸಿದರು. ಸಾಮಾನ್ಯವಾಗಿ ನದಿ, ಕೆರೆ, ತೊರೆ ಸೇರಿದಂತೆ ನೀರಿನ ಮೂಲಗಳ ಸುತ್ತಮುತ್ತ ಕಂಡು ಬರುವ ನೀರುನಾಯಿ ಕೃಷಿ ಪ್ರದೇಶದ ಭತ್ತದ ಗದ್ದೆಯಲ್ಲಿ ಪ್ರತ್ಯಕ್ಷವಾಗಿರುವುದು ಅಪರೂಪ. ಈ ಹಿನ್ನೆಲೆಯಲ್ಲಿ ಪಡ್ಡಂ ಪರಿಸರದಲ್ಲಿ ನೀರುನಾಯಿ ಕಾಣಿಸಿಕೊಂಡಿರುವುದು ಸ್ಥಳೀಯರ ಗಮನ ಸೆಳೆದಿದೆ.
Kshetra Samachara
10/08/2026 04:13 pm
LOADING...