ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ : ತಲೆ ಮೇಲೆ ಕಲ್ಲು ಹಾಕಿ ಅಣ್ಣನಿಂದಲೇ ಸ್ವಂತ ತಮ್ಮನ ಭೀಕರ ಹತ್ಯೆ

ಕಲಬುರಗಿ : ಜಮೀನು ಉಳುಮೆ ಮಾಡುವ ವಿಚಾರವಾಗಿ ಅಣ್ಣ-ತಮ್ಮನ ನಡುವೆ ನಡೆದ ಜಗಳ ಕೊಲೆಯಲ್ಲಿ ದಾರುಣ ಅಂತ್ಯ ಕಂಡ ಘಟನೆ ಕಲಬುರಗಿ ತಾಲೂಕಿನ ಭೂಪಾಲ್ ತೆಗನೂರ್ ಗ್ರಾಮದಲ್ಲಿ ನಡೆದಿದೆ.

ಧನರಾಜ್ @ ಚಿನ್ನು ಕೊಲೆಯಾದ ಸಹೋದರ ಎಂದು ತಿಳಿದುಬಂದಿದೆ. ಸಹೋದರ ಶಿವರಾಜ್ ಶೆಳಗ್ಗಿಯಿಂದ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ತನ್ನ ತಾಯಿಗೆ ಕರೆ ಮಾಡಿದ ಹಂತಕ, ಹತ್ಯೆ ಮಾಡಿರುವ ವಿಚಾರವನ್ನು ತಿಳಿಸಿದ್ದಾನೆ.

ತನ್ನ ಸ್ವಂತ ತಮ್ಮ ಜಮೀನಿನಲ್ಲಿ ಊಟ ಮಾಡುತ್ತಿದ್ದ ವೇಳೆ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Edited By : PublicNext Desk
PublicNext

PublicNext

19/09/2026 01:15 pm

Cinque Terre

3.91 K

Cinque Terre

0

ಸಂಬಂಧಿತ ಸುದ್ದಿ