", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1750591737-WhatsApp-Image-2025-06-22-at-4.58.00-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MaheshKalburgi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಬುರಗಿ: ವಸತಿ ನಿಗಮದಲ್ಲಿ ಹಣ ಕೊಟ್ಟವರಿಗೆ ಮನೆಗಳ ಹಂಚಿಕೆ ಬಗ್ಗೆ ಶಾಸಕ ಬಿ.ಆರ್. ಪಾಟೀಲ್ ಆಡಿಯೋ ವೈರಲ್ ವಿಚಾರದ ಬಗ್ಗೆ ನಗರದಲ್ಲಿ ಮಾಧ್ಯಮದವ...Read more" } ", "keywords": "Kalaburagi, audio controversy, BR Patil MLA statement, Karnataka politics, public reaction.", "url": "https://dashboard.publicnext.com/node" } ಕಲಬುರಗಿ: ನನ್ನ ಆಡಿಯೋ ವಿಚಾರ ಯಾಕೆ ಇಷ್ಟೊಂದು ಸೀರಿಯಸ್?- ಶಾಸಕ ಬಿ.ಆರ್. ಪಾಟೀಲ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ನನ್ನ ಆಡಿಯೋ ವಿಚಾರ ಯಾಕೆ ಇಷ್ಟೊಂದು ಸೀರಿಯಸ್?- ಶಾಸಕ ಬಿ.ಆರ್. ಪಾಟೀಲ್

ಕಲಬುರಗಿ: ವಸತಿ ನಿಗಮದಲ್ಲಿ ಹಣ ಕೊಟ್ಟವರಿಗೆ ಮನೆಗಳ ಹಂಚಿಕೆ ಬಗ್ಗೆ ಶಾಸಕ ಬಿ.ಆರ್. ಪಾಟೀಲ್ ಆಡಿಯೋ ವೈರಲ್ ವಿಚಾರದ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಕೈ ಶಾಸಕ ಬಿ.ಆರ್. ಪಾಟೀಲ್ ಮಾತನಾಡಿದರು.

ಸಿಎಂ ಕರೆದಿಲ್ಲ, ಡಿಸಿಎಂ ಡಿಕೆಶಿ ಅವರೂ ಕರೆದಿಲ್ಲ. ಕರೆದರೆ ಹೋಗಿ ಮಾತಾಡ್ತೇನೆ. ಆದ್ರೆ, ಆಡಿಯೋ ಲೀಕ್ ಹೇಗಾಯ್ತು ಅಂತ ಗೊತ್ತಿಲ್ಲ. ಸರ್ಫರಾಜ್ ಖಾನ್ ಗೆ ಒಂದು ರಿಕ್ವೆಸ್ಟ್ ಮಾಡಲು ಫೋನ್ ಮಾಡಿದ್ದೆ. ಯಾಕಂದ್ರೆ ಈ ಹಿಂದೆ ಹೇಳಿದ್ರು ಮನೆಗಳು ಮಂಜೂರು ಆಗಿರಲಿಲ್ಲ ಅಂತ, ಅದಕ್ಕೆ ಫೋನ್ ಮಾಡಿ ಮಾತಾಡಿದ್ದೆ.

ನನ್ನ ಫೋನ್ ನಿಂದಲೇ ಮಾತಾಡಿದ್ದೇವೆ. ನನ್ನ ಫೋನ್ ನಿಂದಲೇ ಕಾಲ್ ಮಾಡಿದ್ದು. ಸಚಿವ ಕೃಷ್ಣ ಭೈರೇಗೌಡರು ಹೇಳಿದ್ದು ಅಷ್ಟು ಸೀರಿಯಸ್ ಆಗಲಿಲ್ಲ. ಆದ್ರೆ, ನನ್ ಆಡಿಯೋ ವಿಚಾರ ಯಾಕೆ ಇಷ್ಟು ಸೀರಿಯಸ್ ಆಗ್ತಿದೆ ಎಂದು ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ನಾನು ಬ್ಲ್ಯಾಕ್‌ ಮೇಲ್ ಮಾಡಿ ಮಂತ್ರಿ ಆಗುವವನಲ್ಲ. ನಾವು ಲೆಟರ್ ಕೊಟ್ಟು ಕೊಟ್ಟು ಸುಸ್ತಾದ್ವಿ ಮನೆಗಳು ಮಂಜೂರು ಮಾಡಲಿಲ್ಲ. ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕೇಳಿದ್ರು, ಅದಕ್ಕೆ ಲೆಟರ್ ಹೆಡ್ ಕೊಟ್ಟಿದ್ದೆ. ಅವರಿಗೆ ಮನೆ ಕೊಟ್ಟರು. ಈ ವಿಚಾರಕ್ಕಾಗಿ ನಾನು ಫೋನ್ ಮಾಡಿ ಮಾತಾಡಿದ್ದು. ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಆಗಬೇಕು, ಅದೂ ಆಗಿಲ್ಲ.

ಈ ಬಗ್ಗೆ ತನಿಖೆ ಮಾಡೋದಾದ್ರೆ ಮಾಡಲಿ, ತನಿಖೆ ಆಗಲಿ ಎಂದರು.

ಸಚಿವ ಕೃಷ್ಣಭೈರೇಗೌಡರು ಜನರ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತಾಡಿದ್ರೆ ಅಷ್ಟು ಸೀರಿಯಸ್ ಆಗಲ್ಲ. ಆದರೆ, ನಾನು ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತಾಡಿದ್ದೇನೆ ಅಷ್ಟೇ, ಇಷ್ಟು ಸೀರಿಯಸ್ ಯಾಕೆ‌? ನಾನೇ ಮಾತಾಡಿದ್ದೇನೆ ಅಂತ ಈಗಾಗಲೇ ಹೇಳಿದ್ದೇನೆ.

ಯಾರೊಬ್ಬ ವ್ಯಕ್ತಿಯ ಹೆಸರು ತೆಗೆದುಕೊಂಡು ನಾನು ಮಾತಾಡಿಲ್ಲ ಎಂದು ಹೇಳಿದರು.

Edited By : Shivu K
PublicNext

PublicNext

22/06/2025 04:59 pm

Cinque Terre

19.63 K

Cinque Terre

0

ಸಂಬಂಧಿತ ಸುದ್ದಿ