", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1750756583-WhatsApp-Image-2025-06-24-at-2.46.13-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MaheshKalburgi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಬುರಗಿ : ಇಸ್ರೇಲ್- ಇರಾನ್ ಯುದ್ದ ವಿಚಾರ ಬಗ್ಗೆ ನಗರದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಜಗತ್ತಿನಲ್ಲಿ ಯಾವ ದೇಶಗಳ...Read more" } ", "keywords": "Kalaburagi, Mallikarjun Kharge, US-Iran conflict, international relations, criticism of US actions.", "url": "https://dashboard.publicnext.com/node" }
ಕಲಬುರಗಿ : ಇಸ್ರೇಲ್- ಇರಾನ್ ಯುದ್ದ ವಿಚಾರ ಬಗ್ಗೆ ನಗರದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಜಗತ್ತಿನಲ್ಲಿ ಯಾವ ದೇಶಗಳ ಮಧ್ಯೆಯೂ ಯುದ್ಧ ಒಳ್ಳೆಯದಲ್ಲ. ಯಾರು ಯಾರ ಮೇಲೂ ಯುದ್ದ ಮಾಡಬಾರದು. ಎಂಥದ್ದೆ ಸಮಸ್ಯೆ ಇರಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಯುದ್ಧ ಮಾಡಿ ಎಲ್ಲಾ ನಾಶ ಆದ್ರೆ ಎಲ್ಲಿ ಬದುಕಿತ್ತಿರಿ?ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು. ಈ ಹಿಂದಿನಿಂದಲೂ ನಮ್ಮ ಜೊತೆ ಇರಾನ್ ಒಳ್ಳೆಯ ಸಂಬಂಧ ಹೊಂದಿದೆ. ತೈಲ ಆಮದು ಸೇರಿದಂತೆ ಒಳ್ಳಯ ಸಂಬಂಧ ಹೊಂದಿದೆ. ಭಾರತ- ಪಾಕಿಸ್ತಾನ ಯುದ್ಧ ವೇಳೆ ಎಲ್ಲರೂ ಒಂದಾಗಿ ಅಂದ್ರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಒಂದಾಗಿದ್ದೆವು ಆದ್ರೆ ಮೋದಿಯವರೇ ಸರ್ವಪಕ್ಷ ಸಭೆಗೆ ಬರಲಿಲ್ಲ. ಇದೇನು ತೋರಿಸುತ್ತೆ ಅಂದ್ರೆ ಮೋದಿಯವರ ಅಹಾಂಕರ ತೋರಿಸುತ್ತೆ. ಎಲ್ಲರೂ ಒಂದಾಗಿರೋ ಸಂದೇಶ ಕೊಟ್ರೆ ಒಳ್ಳೆಯದು. ಆದ್ರೆ ಅವರೇ ಕರೆದ ಸಭೆಗೆ ಮೋದಿನೇ ಬರೋದಿಲ್ಲ. ಇಡೀ ವಿಶ್ವಕ್ಕೆ ಬುದ್ದನ ಶಾಂತಿ ಬೇಕು..? ಯುದ್ಧ ಬೇಕಾಗಿಲ್ಲ.
ಮಹಾರಾಷ್ಟ್ರ ಚುನಾವಣೆಯ ಬಗ್ಗೆ ನಾವ ಆವಗಲೇ ಹೇಳಿದ್ದೆವು. ಅಲ್ಲಿ ಪಾರದರ್ಶಕ ಚುನಾವಣೆ ಆಗಿಲ್ಲ ಅಂತ. ಅದನ್ನೆ ರಾಹುಲ್ ಪ್ರಶ್ನೆ ಮಾಡ್ತಿದ್ದಾರೆ ಎಂದು ಹೇಳಿದರು.
PublicNext
24/06/2025 02:46 pm