", "articleSection": "Infrastructure,Crime,Law and Order,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1750750722-Youtube-HD.00_28_45_04.Still2432~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarChikkaballapur" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಂತಾಮಣಿ : ಸ್ಮಶಾನಗಳ ಜಮೀನು ಅಕ್ರಮವಾಗಿ ಒತ್ತುವರಿಯಾಗಿದ್ದನ್ನು ಅಳತೆ ಮಾಡಲು ಹೋದ ಅಧಿಕಾರಿಗಳ ಮೇಲೆ ಒತ್ತುವರಿದಾರರು ತಗಾದೆ ತೆಗೆದು ಜಮೀನು ಅ...Read more" } ", "keywords": "Chintamani land encroachment, dispute between encroachers and officials, Chintamani land grab clash, officials vs encroachers Chintamani, Chintamani land dispute, encroachment removal Chintamani, Chintamani land issue, officials confront encroachers, Chintamani land grabbing, land mafia Chintamani", "url": "https://dashboard.publicnext.com/node" } ಚಿಂತಾಮಣಿ : ಜಮೀನು ಒತ್ತುವರಿದಾರರ ಹಾಗೂ ಅಧಿಕಾರಿಗಳ ನಡುವೆ ಜಟಾಪಟಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಂತಾಮಣಿ : ಜಮೀನು ಒತ್ತುವರಿದಾರರ ಹಾಗೂ ಅಧಿಕಾರಿಗಳ ನಡುವೆ ಜಟಾಪಟಿ

ಚಿಂತಾಮಣಿ : ಸ್ಮಶಾನಗಳ ಜಮೀನು ಅಕ್ರಮವಾಗಿ ಒತ್ತುವರಿಯಾಗಿದ್ದನ್ನು ಅಳತೆ ಮಾಡಲು ಹೋದ ಅಧಿಕಾರಿಗಳ ಮೇಲೆ ಒತ್ತುವರಿದಾರರು ತಗಾದೆ ತೆಗೆದು ಜಮೀನು ಅಳತೆ ಮಾಡಲು ಬಿಡಲ್ಲ ಎಂದು ಅಧಿಕಾರಿಗಳ ಮೇಲೆ ದರ್ಪ ತೋರಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಚೌಡದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂಬಾಜಿದುರ್ಗ ಹೋಬಳಿ, ಚೌಡದೇನಹಳ್ಳಿ ಗ್ರಾಮಸ್ಥರು ಗ್ರಾಮದ ಸರ್ವೆ ನಂ.06 ರ ಪೈಕಿ 70.21 ಗುಂಟೆ ಜಮೀನಿನ ಪೈಕಿ ಸ್ಮಶಾನ ಜಾಗವನ್ನು ಗ್ರಾಮದಲ್ಲಿ ವಾಸವಾಗಿರುವ ಚಿಕ್ಕಬೈರಾರೆಡ್ಡಿ ಬಿನ್ ನಾರಾಯಣರೆಡ್ಡಿ ಸ್ಮಶಾನದ ಪೂರ್ವ ಕಡೆ ಸ್ವಂತ ಜಮೀನು ಹೊಂದಿದ್ದು, ಇವರು ಅಕ್ರಮವಾಗಿ ಈ ಜಾಗವನ್ನು ಒತ್ತುವರಿ ಮಾಡಿಕೊಂಡು ವಿವಿಧ ಮರಗಳನ್ನು ಹಾಗೂ ಸಮಾಧಿಗಳನ್ನು ಜೆ. ಸಿ. ಬಿ. ಯ ಮೂಲಕ, ಕೆಡವಿರುತ್ತಾರೆ, ಆ ಕಾರಣದಿಂದ ಕೂಡಲೇ ತಾಲ್ಲೂಕು ದಂಡಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸರ್ವೆ ಕಾರ್ಯ ನಡೆಸಿ ಸ್ಮಶಾನದ ಜಮೀನು ಗುರುತಿಸುವಂತೆ ಆದೇಶ ಹೊರಡಿಸಿದ್ದರು.

ಇಂದು ಅಂಬಾಜಿದುರ್ಗ ಹೋಬಳಿಯ ರೆವೆನ್ಯೂ ಇನ್ಸ್ಪೆಕ್ಟರ್ ನರಸಿಂಹಮೂರ್ತಿ, ಗ್ರಾಮ ಆಡಳಿತ ಅಧಿಕಾರಿ ದಿವಾಕರ್, ಭೂಮಾಪನ ಇಲಾಖೆಯ ಸರ್ವೆಯರ್ ಆಂಜಿನಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಾಂತರ ಠಾಣೆಯ ಪೊಲೀಸರ ಸೂಕ್ತ ಬಂದೋಬಸ್ತ್ ಪಡೆದುಕೊಂಡು ಜಮೀನನ್ನು ಅಳತೆ ಮಾಡಲು ಮುಂದಾದಾಗ ಒತ್ತುವರಿದಾರರು ಜಮೀನು ಅಳತೆ ಮಾಡಲು ಬಿಡಲ್ಲ ಎಂದು ತಗಾದೆ ತೆಗೆದು ಅಧಿಕಾರಿಗಳ ಮೇಲೆ ಕೆಲಕಾಲ ದರ್ಪ ತೋರಿದರು. ಇದಕ್ಕೆ ಜಗ್ಗದ ಅಧಿಕಾರಿಗಳು ಕೊನೆಗೆ ಸರ್ವೆ ಕಾರ್ಯ ನಡೆಸಿ ಸ್ಮಶಾನ ಒತ್ತುವರಿ ಯಾಗಿರುವುದನ್ನು ಗುರುತಿಸಿ ವಾಪಸ್ ಆದರು.

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ

Edited By : Suman K
Kshetra Samachara

Kshetra Samachara

24/06/2025 01:09 pm

Cinque Terre

320

Cinque Terre

0

ಸಂಬಂಧಿತ ಸುದ್ದಿ