", "articleSection": "Nature,Agriculture", "image": { "@type": "ImageObject", "url": "https://prod.cdn.publicnext.com/s3fs-public/286525-1750918544-WhatsApp-Image-2025-06-26-at-11.44.34-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗುಣಶೆಟ್ಟಿಕೊಪ್ಪ,ಕಾನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ರೈತರು ಮೆಕ್ಕೆಜೋಳ ಬೆಳೆದಿದ್ದರು. ಇನ್ನೇನು ಮೆಕ್ಕೆಜೋ...Read more" } ", "keywords": "Haveri floods, heavy rainfall, maize crop damage, corn waterlogged, farmer distress, Varada river overflow.", "url": "https://dashboard.publicnext.com/node" }
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗುಣಶೆಟ್ಟಿಕೊಪ್ಪ,ಕಾನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ರೈತರು ಮೆಕ್ಕೆಜೋಳ ಬೆಳೆದಿದ್ದರು. ಇನ್ನೇನು ಮೆಕ್ಕೆಜೋಳ ಯಂತ್ರಕ್ಕೆ ಹಾಕಿಸಿ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಮಳೆ ಆರಂಭವಾಯಿತು.
ಮಲೆನಾಡಿನಲ್ಲಿ ಮುಂಗಾರು ಮಳೆ ಧಾರಾಕಾರ ಸುರಿಯಲಾರಂಭಿಸಿತು. ಇದರಿಂದ ಕಂಗೆಟ್ಟ ಮೆಕ್ಕೆಜೋಳ ಬೆಳೆದ ರೈತರು ಮೆಕ್ಕೆಜೋಳವನ್ನು ಹಾವೇರಿ ಜಿಲ್ಲೆ ರಾಣೆಬೆನ್ನೂರು ಮಾರುಕಟ್ಟೆಗೆ ಮಾರಾಟ ಮಾಡಲು ತಂದಿದ್ದರು.
ಆದರೆ, ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಬಿಟ್ಟುಬಿಡದೆ ಸುರಿದ ಮಳೆ, ರೈತರ ಮೆಕ್ಕೆಜೋಳವನ್ನು ಹಾಳು ಮಾಡಿದೆ. ನಿರಂತರ ಮಳೆಗೆ ಎಪಿಎಂಸಿಯಲ್ಲಿ ಒಣ ಹಾಕಿದ್ದ ಮೆಕ್ಕೆಜೋಳ ಮೊಳಕೆ ಒಡೆದು ಕೊಳೆತು ಹೋಗಲಾರಂಭಿಸಿದೆ. ನೂರಾರು ಕ್ವಿಂಟಾಲ್ ಮೆಕ್ಕೆಜೋಳ ಕೊಳೆತು ಹೋಗಿದೆ.
ಒಣಗಲು ಹಾಕಿದ್ದ ಮೆಕ್ಕೆಜೋಳ ಸ್ಥಳದಲ್ಲಿಯೇ ಮೊಳಕೆ ಒಡೆದಿದೆ. ಅಲ್ಲದೆ ಮೆಕ್ಕೆಜೋಳ ಬೂಸ್ಟ್ ಬಂದಿದ್ದು ಕೆಟ್ಟವಾಸನೆ ಬರಲಾರಂಭಿಸಿದೆ. ಇದನ್ನು ಮಾರಾಟ ಮಾಡಲು ಹೋದರೆ ವ್ಯಾಪಾರಿಗಳು ಸಹ ತಿರಸ್ಕರಿಸುತ್ತಿದ್ದಾರೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದರು.
PublicNext
26/06/2025 11:46 am