", "articleSection": "WaterPower,Public Feed,Public News", "image": { "@type": "ImageObject", "url": "https://prod.cdn.publicnext.com/s3fs-public/41048720250626011600filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MadhuKeshavSorab" }, "editor": { "@type": "Person", "name": "9916633623" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಾಗರ: ಕರೂರು ಹೋಬಳಿಯ ಮುಳುಗಡೆ ರೈತರು ಪುನಃ ಗೋಮಾಳ ಕಾನು ಉಳಿವಿಗೆ ಒಗ್ಗೂಡಿ ಹೋರಾಟ ನಡೆಸಬೇಕು. ಕಂದಾಯ-ಅರಣ್ಯ ಇಲಾಖೆಗಳು ಸರ್ಕಾರದ ನೈಸರ್ಗಿಕ ಭ...Read more" } ", "keywords": ""Kalasa Banduri, Flood affected farmers, Biodiversity forest, Anantha Hegde Ashisara appeal, Environmental awareness" ", "url": "https://dashboard.publicnext.com/node" }
ಸಾಗರ: ಕರೂರು ಹೋಬಳಿಯ ಮುಳುಗಡೆ ರೈತರು ಪುನಃ ಗೋಮಾಳ ಕಾನು ಉಳಿವಿಗೆ ಒಗ್ಗೂಡಿ ಹೋರಾಟ ನಡೆಸಬೇಕು. ಕಂದಾಯ-ಅರಣ್ಯ ಇಲಾಖೆಗಳು ಸರ್ಕಾರದ ನೈಸರ್ಗಿಕ ಭೂಮಿ ರಕ್ಷಿಸಲು ಮುಂದಾಗಬೇಕು ಎಂದು ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಕರೆ ನೀಡಿದರು.
ತಾಲ್ಲೂಕು ಸಿಗಂದೂರು ಬಳಿ ಕಳಸವಳ್ಳಿ ಜೀವವೈವಿಧ್ಯ ವನದಲ್ಲಿ ಗ್ರಾಮಭೂಮಿ ಉಳಿಸಿ ಹೋರಾಟದ ನೆನಪು, ಮುಳುಗಡೆ ಪ್ರದೇಶದ ಕಾನು-ಗೋಮಾಳ ಪರಿಸ್ಥಿತಿ ಸಮಾಲೋಚನೆ, ಜಾಗೃತಿ ಅಭಿಯಾನದ ವಿಶಿಷ್ಠ ಕಾರ್ಯಕ್ರಮದಲ್ಲಿ ವೃಕ್ಷಾರೋಪಣ ನೆರವೇರಿಸಿ ಮಾತನಾಡಿದರು.
ಇಂದು ಇಲ್ಲಿ ಹೋರಾಟದ ನೆನಪಿಗೆ ಜೀವವೈವಿಧ್ಯ ವನವನ್ನು ೧೦೦ ಎಕರೆಯಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಗ್ರಾಮ ಅರಣ್ಯ ಸಮೀತಿಗೆ ಜೀವ ತುಂಬ ಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತಬೇಕು ಪಟ್ಟಭದ್ರ ಹಿತಾಸಕ್ತಿಗಳು ಭೂ ಕಬಳಿಕೆ ಮಾಡದಂತೆ ತಡೆ ಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಕಳಸವಳ್ಳಿ ಪ್ರದೇಶ ಭೂಕುಸಿತ ವಲಯದಲ್ಲಿದೆ, ಈ ಹಿಂದೆ ಭಾರೀ ಭೂಕುಸಿತ ಆಗಿತ್ತು ಎಂದು ಎಚ್ಚರಿಸಿದರು.
೧೯೮೦ ರ ದಶಕದಲ್ಲಿ ನಡೆದ ಕಳಸವಳ್ಳಿ ಗ್ರಾಮ ಭೂಮಿ ಉಳಿಸಿ- ಚಳಿವಳಿಯಿಂದ ಕೈಗಾರಿಕಾ ನೆಡುತೋಪು ನಿರ್ಮಾಣ, ಗ್ರಾಮ ಭೂಮಿ ಪರಭಾರೆ ತಪ್ಪಿದೆ. ಮುಳುಗಡೆ ಪ್ರದೇಶದ ರೈತರ ಹೋರಾಟ ವಿಧಾನಸಭೆಯಲ್ಲಿ ಪ್ರತಿ ಧ್ವನಿಸಿತ್ತು. ಕಳಸವಳ್ಳಿ, ತುಮರಿ ಪ್ರದೇಶದ ರೈತರು, ಪರಿಸರ ಕಾರ್ಯಕರ್ತರು ನ್ಯಾಯಾಲಯಕ್ಕೆ ಅಲೆದಾಡಬೇಕಾಯಿತು. ಆದರೆ, ಬಿರುಸಾದ ಹೋರಾಟ ಮಲೆನಾಡಿಗೇ ಗಟ್ಟಿ ಸಂದೇಶ ನೀಡಿತ್ತು ಎಂದು ನೆನಪಿಸಿದರು.
ಜೀವವೈವಿಧ್ಯ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ಗ್ರಾಮ ಪಂಚಾಯತ ಜೀವ ವೈವಿಧ್ಯ ಸಮಿತಿಗಳು ಕ್ರೀಯಾಶೀಲವಾಗಬೇಕು, ಗ್ರಾಮಗಳ ಕೆರೆ, ಗೋಮಾಳ ಬೆಟ್ಟಗಳ ಸಂರಕ್ಷಣೆಗೆ ಪಂಚಾಯತಗಳು ಮುಂದಾಗಬೇಕು, ಬೇಕಾಬಿಟ್ಟಿ ಜೆಸಿಬಿಗಳ ಹಾವಳಿಗೆ ಕಂದಾಯ ಇಲಾಖೆ ತಡೆ ಹಾಕಬೇಕು, ಅರಣ್ಯ ಇಲಾಖೆ, ವನ್ಯ ಜೀವಿ ಇಲಾಖೆ ರೈತರ ಸಹಭಾಗಿತ್ವ ಪಡೆಯಬೇಕು. ವನ್ಯ ಜೀವ ಇಲಾಖೆ ಕಳಸವಳ್ಳಿಯಲ್ಲಿ ಪರಿಸರ ಅಭಿವೃದ್ಧಿ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದರು.
ವೃಕ್ಷಲಕ್ಷ ಆಂದೋಲನದ ಸಂಚಾಲಕ ಕೆ.ವೆಂಕಟೇಶ್, ಗ್ರಾಮ ಭೂಮಿ ಉಳಿಸಿ ಜಾಗೃತಿ ಅಭಿಯಾನ ಒಂದು ತಿಂಗಳಿಂದ ಮಲೆನಾಡಿನಲ್ಲಿ ನಡೆಯುತ್ತಿದೆ. ಪರಿಸರ ಕಾರ್ಯಕರ್ತ ತುಮರಿ ಅಶೋಕ ಅವರನ್ನು ತಾಲೂಕಾ ಪಂಚಾಯತ ಜೀವವೈವಿಧ್ಯ ಸಮಿತಿ ೧ ವರ್ಷ ಹಿಂದೆ ಸನ್ಮಾನ ಮಾಡಿದೆ ಎಂದರು.
ಈ ವೇಳೆ ಪರಿಸರ ಕಾರ್ಯಕರ್ತ ಕಳಸವಳ್ಳಿ ವಿಶ್ವೇಶ್ವರ ಅವರ ಸಾಮಾಜಿಕ ಸೇವೆ ಸ್ಮರಿಸಲಾಯಿತು.
ಹಸಿರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಗರ ಪರ್ಯಾವರಣ ಸಂಘಟನೆ ಅಧ್ಯಕ್ಷ ತುಮರಿ ಅಶೋಕ ಅವರು ಜೀವವೈವಿಧ್ಯ ದಾಖಲಾತಿ ಶಿಬಿರ, ಸುಸ್ಥಿರ ಅಭಿವೃದ್ದಿ ಕಾರ್ಯಾಗಾರ ಹೋರಾಟ ಗಣಿಗಾರಿಕೆ ವಿರುದ್ಧ ಚಳುವಳಿ, ವೃಕ್ಷಾರೋಪಣ ಮುಂತಾದ ಕಾರ್ಯಗಳು ವೃಕ್ಷಲಕ್ಷ ಆಂದೋಲನದ ನಿರಂತರ ಮುಂದುವರಿಕೆಗೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಯೋಗಶಿಕ್ಷಕ ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಅನಿಲಾ, ಶ್ರೀಧರಮೂರ್ತಿ, ಚುಟ್ಟಿಕೆರೆ ಸತ್ಯನಾರಾಯಣ, ಶ್ರೀಕಾಂತ್ ಚುಟ್ಟಿಕೆರೆ, ಅರಣ್ಯ ಅಧಿಕಾರಿ ರಾಘವೇಂದ್ರ, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಮೊದಲಾದವರು ಇದ್ದರು.
Kshetra Samachara
26/06/2025 01:16 pm