", "articleSection": "Science and Technology", "image": { "@type": "ImageObject", "url": "https://prod.cdn.publicnext.com/s3fs-public/52563-1750926960-WhatsApp-Image-2025-06-26-at-1.42.55-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಇಸ್ರೋ ಮತ್ತು ನಾಸಾ ಜಂಟಿಯಾಗಿ ಕೈಗೊಂಡಿರುವ ಎಕ್ಸಿಯೋಮ್-4 ಮಿಷನ್‌ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು ವಿಶೇಷ ಕೊಡುಗೆ ನೀಡಿದೆ. ಹ...Read more" } ", "keywords": "Dharwad UAS research, space-bound fenugreek seeds, Dharwad Agricultural University, fenugreek in space, UAS Dharwad achievement", "url": "https://dashboard.publicnext.com/node" } ಧಾರವಾಡ: ಅಂತರಿಕ್ಷಕ್ಕೆ ಹಾರಿದ ಧಾರವಾಡ ಕೃಷಿ ವಿವಿ ಸಂಶೋಧಿಸಿದ ಹೆಸರು, ಮೆಂತ್ಯೆ ಕಾಳು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಂತರಿಕ್ಷಕ್ಕೆ ಹಾರಿದ ಧಾರವಾಡ ಕೃಷಿ ವಿವಿ ಸಂಶೋಧಿಸಿದ ಹೆಸರು, ಮೆಂತ್ಯೆ ಕಾಳು

ಧಾರವಾಡ: ಇಸ್ರೋ ಮತ್ತು ನಾಸಾ ಜಂಟಿಯಾಗಿ ಕೈಗೊಂಡಿರುವ ಎಕ್ಸಿಯೋಮ್-4 ಮಿಷನ್‌ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು ವಿಶೇಷ ಕೊಡುಗೆ ನೀಡಿದೆ.

ಹೌದು! ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಂತರಿಕ್ಷಕ್ಕೆ ಹೆಸರು ಮತ್ತು ಮೆಂತ್ಯೆ ಕಾಳುಗಳನ್ನು ಕಳುಹಿಸಿಕೊಟ್ಟಿದ್ದು, ಅಂತರಿಕ್ಷದಲ್ಲಿ ಇವುಗಳ ಸೇವನೆ ಯೋಗ್ಯವೇ ಎಂಬುದರ ಕುರಿತು ವಿಜ್ಞಾನಿಗಳು ಸಂಶೋಧನೆ ಕೈಗೊಳ್ಳಲಿದ್ದಾರೆ. ದೇಶದಿಂದ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಏಳು ವಿಜ್ಞಾನ ಎಕ್ಸ್ಪೀರಿಮೆಂಟ್‌ಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ ಧಾರವಾಡ ಕೃಷಿ ವಿವಿಯ ಹೆಸರು ಕಾಳು ಮತ್ತು ಮೆಂತ್ಯೆ ಕಾಳುಗಳನ್ನೂ ಕಳುಹಿಸಿದೆ. ಕಳೆದ ವಾರವಷ್ಟೇ ಕೃಷಿ ವಿವಿಯ ಪ್ರಧಾನ ಸಂಶೋಧಕ ಡಾ. ರವಿಕುಮಾರ ಹೊಸಮನಿ ಮತ್ತು ಸಹಾಯಕ ಸಂಶೋಧಕ ಡಾ. ಸುಧೀರ ಸಿದ್ದಾಪೂರರೆಡ್ಡಿ ಅವರು ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಹೆಸರು ಕಾಳು ಮತ್ತು ಮೆಂತ್ಯೆ ಕಾಳುಗಳನ್ನು ನೀಡಿದ್ದು, ಅವರು ಅವುಗಳನ್ನು ಅಂತರಿಕ್ಷದಲ್ಲಿಯೇ ಮೊಳಕೆಯೊಡೆಸಲಿದ್ದಾರೆ.

ವಿಶೇಷ ಎಂದರೆ ಅದೇ ಸಮಯದಲ್ಲಿ ಧಾರವಾಡ ಕೃಷಿ ವಿವಿಯಲ್ಲಿಯೂ ಹೆಸರು ಮತ್ತು ಮೆಂತ್ಯೆ ಕಾಳುಗಳನ್ನು ಮೊಳಕೆಯೊಡೆಸಲಾಗುತ್ತಿದೆ. ಸುಮಾರು 14 ದಿನಗಳ ಅಂತರಿಕ್ಷಯಾನದ ಬಳಿಕ ಅದೇ ಮೆಂತ್ಯೆ ಮತ್ತು ಹೆಸರು ಕಾಳುಗಳನ್ನು ಮರಳಿ ಕೃಷಿ ವಿವಿಗೆ ಕಳುಹಿಸಲಾಗುತ್ತದೆ.

ಅಂತರಿಕ್ಷದಲ್ಲಿ ಮೊಳಕೆಯೊಡೆದ ಕಾಳು ಮತ್ತು ಇಲ್ಲಿ ಮೊಳಕೆಯೊಡೆದ ಕಾಳುಗಳಲ್ಲಿಯ ಪೋಷಕಾಂಶಗಳನ್ನು ಇಲ್ಲಿಯ ವಿಜ್ಞಾನಿಗಳು ಸಂಶೋಧನೆ ನಡೆಸಲಿದ್ದಾರೆ. ಒಂದು ವೇಳೆ ಅಂತರಿಕ್ಷದಲ್ಲಿ ಮತ್ತು ಭೂಮಿಯ ಮೇಲೆ ಮೊಳಕೆಯೊಡೆದ ಕಾಳುಗಳಲ್ಲಿ ಒಂದೇ ಬಗೆಯ ಪೋಷಕಾಂಶಗಳು ಇದ್ದರೆ ಗಗನಯಾತ್ರಿಗಳು ಆರೋಗ್ಯದ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಇದನ್ನು ಸೇವನೆ ಮಾಡಬಹುದಾಗಿದೆ ಎನ್ನುವುದನ್ನು ತಿಳಿಸುವುದೇ ಇದರ ಉದ್ದೇಶವಾಗಿದೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/06/2025 02:06 pm

Cinque Terre

17.62 K

Cinque Terre

0

ಸಂಬಂಧಿತ ಸುದ್ದಿ