", "articleSection": "Infrastructure,Science and Technology,Government", "image": { "@type": "ImageObject", "url": "https://prod.cdn.publicnext.com/s3fs-public/229640-1750680412-hbl.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ರೈಲ್ವೆ ಇಲಾಖೆ ಒಂದಿಲ್ಲೊಂದು ಸಾಧನೆ ಮಾಡುತ್ತಾ ಬಂದಿದೆ. ಅದೇ ರೀತಿ ಈಗ ಗುಡ್ಡ, ಘಾಟ್ ಪ್ರದೇಶಗಳಲ್ಲಿ ನೆಟ್ವರ್ಕ್ ಇಲ್ಲದೆ ಸಾಕಷ್ಟು...Read more" } ", "keywords": "Hubballi railway network solution, Southwestern Railway modern technology, hilly area network issue, railway communication upgrade, network problem solution, railway technology innovation, Hubballi railway updates, railway connectivity improvement", "url": "https://dashboard.publicnext.com/node" }
ಹುಬ್ಬಳ್ಳಿ: ರೈಲ್ವೆ ಇಲಾಖೆ ಒಂದಿಲ್ಲೊಂದು ಸಾಧನೆ ಮಾಡುತ್ತಾ ಬಂದಿದೆ. ಅದೇ ರೀತಿ ಈಗ ಗುಡ್ಡ, ಘಾಟ್ ಪ್ರದೇಶಗಳಲ್ಲಿ ನೆಟ್ವರ್ಕ್ ಇಲ್ಲದೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಈ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು, ನೈರುತ್ಯ ರೈಲ್ವೆ ಇಲಾಖೆ ಟನಲ್ ಕಮ್ಯುನಿಕೇಷನ್ ಎಂಬ ಹೊಸ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದ್ದಾರೆ.
ಘಾಟ್ ಪ್ರದೇಶಗಳಲ್ಲಿ ಸಂಚರಿಸುವ ರೈಲುಗಳಲ್ಲಿ ಲೋಕೋಪೈಲಟ್ ಹಾಗೂ ಗಾರ್ಡ್ ಗಳ ನಡುವಿನ ಸಂವಹನ ಅತ್ಯಮೂಲ್ಯವಾಗಿದೆ. ಬಹಳಷ್ಟು ಸಂದರ್ಭದಲ್ಲಿ ಸಂವಹನ ಸಮಸ್ಯೆ ಉಂಟಾಗಿ ಸಾಕಷ್ಟು ತೊಂದರೆಗಳು ಆಗಿದ್ದುಂಟು. ಈ ಸಮಸ್ಯೆ ನಿವಾರಿಸುವ ಉದ್ದೇಶದಿಂದ ನೈರುತ್ಯ ರೈಲ್ವೆ ವಲಯ ಕ್ಯಾಸಲ್ ರಾಕ್ ಮತ್ತು ಕುಲೆಮ್ ಮಧ್ಯದ ಬ್ರಗಾಂಜಾ ಘಾಟ್ ನಲ್ಲಿ ವಿಶ್ವದರ್ಜೆಯ ನೆಟ್ವರ್ಕ್ ಸೌಲಭ್ಯವನ್ನು ಅಳವಡಿಸುತ್ತಿದೆ. ಭೂಕುಸಿತ, ಹಳಿಗಳ ಮೇಲೆ ಮರಗಳು ಬೀಳುವುದು, ವನ್ಯಜೀವಿಗಳು ಬರುವುದು ಮುಂತಾದ ಸಮಸ್ಯೆಗಳಿಂದಾಗಿ ಸುಗಮ ರೈಲು ಸಂಚಾರಕ್ಕೆ ತೊಂದರೆಯಾಗುವುದು ಪ್ರತಿ ಮಳೆಗಾಲದಲ್ಲಿ ಸಾಮಾನ್ಯ ಸಮಸ್ಯೆವಾಗಿದೆ. ಈ ಸಂದರ್ಭದಲ್ಲಿ ಲೋಕೋಪೈಲಟ್ ರೈಲಿನ ಕೊನೆಯ ಭಾಗದಲ್ಲಿರುವ ಗಾರ್ಡ್ ಹಾಗೂ ರೈಲು ನಿಲ್ದಾಣಗಳ ಮಧ್ಯೆ ವಾಕಿಟಾಕಿ ಮೂಲಕ ಪರಸ್ಪರ ಸಂವಹನ ನಡೆಸಿ, ಸಂಬಂಧಿಸಿದವರಿಗೆ ಸಮಸ್ಯೆಯನ್ನು ತಿಳಿಸಿ ರಕ್ಷಣಾ ಕಾರ್ಯ ನಡೆಸಲಾಗುತ್ತದೆ. ಆದ್ರೆ, ಘಾಟ್ ಪ್ರದೇಶದಲ್ಲಿ ಅದರಲ್ಲೂ ಮಳೆಗಾಲದಲ್ಲಿ ಉಂಟಾಗುವ ನೆಟ್ವರ್ಕ್ ಸಮಸ್ಯೆಯಿಂದಾಗಿ ಪರಸ್ಪರ ಸಂವಹನ ನಡೆಸುವುದು ಕಷ್ಟವಾಗುತ್ತದೆ.
ಇನ್ನು ಕರಂಜೊಲ್, ದೂಧಸಾಗರ, ಸೊನಾಲಿಮ್ ನಿಲ್ದಾಣಗಳ ಮಧ್ಯದ ಘಾಟ್ ಪ್ರದೇಶದಲ್ಲಿ ದಟ್ಟವಾದ ಅರಣ್ಯ ಇದ್ದು, ಅನೇಕ ಬಾರಿ ಹಳಿಗಳ ಮೇಲೆ ಹುಲಿ, ಚಿರತೆಯಂತಹ ಇನ್ನಿತರ ವನ್ಯಜೀವಿಗಳು ಕಾಣಿಸುತ್ತವೆ. ಇಂತಹ ಸಮಯದಲ್ಲಿ ರೈಲು ನಿಲುಗಡೆಗೊಳ್ಳುತ್ತದೆ. ಆಗ, ರೈಲಿನ ಹಿಂಬದಿ ಇರುವ ಗಾರ್ಡ್ಗಳಿಗೆ, ರೈಲು ನಿಲ್ದಾಣಕ್ಕೆ ಮಾಹಿತಿ ಕೊಡುವುದು ಸಹ ಅಸಾಧ್ಯ ಎಂಬಂತಹ ಪರಿಸ್ಥಿತಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಉದ್ಭವಿಸುತ್ತಿದೆ. ಈ ಎಲ್ಲ ಸಮಸ್ಯೆ ಬಗೆಹರಿಸಲು ರೈಲ್ವೆ ಇಲಾಖೆ ಟನಲ್ ಕಮ್ಯುನಿಕೇಷನ್ ಎಂಬ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಅವರು ಏನು ಹೇಳಿದ್ದಾರೆ ಕೇಳಿ.
ರಾಕ್ ಮತ್ತು ಕುಲಂ ಘಾಟ್ 26 ಕಿಮೀ ರೈಲು ಹಳಿ ಉದ್ದಕ್ಕೂ ಅಪ್ಟಿಕಲ್ ಫೈಬರ್ ಅಳವಡಿಸುತ್ತಿದೆ. ಈ ಹೊಸ ತಂತ್ರಜ್ಞಾನವನ್ನು ಒಟ್ಟು 12.21 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು, ಇದೇ ಅಕ್ಟೋಬರ್ ಅಥವಾ ಡಿಸೆಂಬರ್ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಪ್ರಥಮ ಹಂತದ ಹುಬ್ಬಳ್ಳಿ ವಿಭಾಗದ ಫಲಿತಾಂಶದ ನಂತರ ಸುಬ್ರಮಣ್ಯ - ಸಕಲೇಶಪುರ ನಡುವೆ ಇರುವ ಘಾಟ್ ಪ್ರದೇಶದಲ್ಲಿಯೂ ಇದೇ ತಂತ್ರಜ್ಞಾನ ಅಳವಡಿಸಲು ಮುಂದಾಗಿದ್ದಾರೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/06/2025 05:37 pm