", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/405356-1751216581-bavi.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಹುಬ್ಬಳ್ಳಿಯ ಅಮರಗೋಳ ಗ್ರಾಮದಲ್ಲಿ, ಶತಮಾನದ ಹಳೇ ಬಾವಿಯೊಂದು ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಅದನ್ನು ಕಂಡ ಅಮರಗೋಳದ ಯುವಕರು...Read more" } ", "keywords": "Hubballi, Amargol village, well cleaning, youth initiative, cleanliness drive.", "url": "https://dashboard.publicnext.com/node" }
ಹುಬ್ಬಳ್ಳಿ: ಹುಬ್ಬಳ್ಳಿಯ ಅಮರಗೋಳ ಗ್ರಾಮದಲ್ಲಿ, ಶತಮಾನದ ಹಳೇ ಬಾವಿಯೊಂದು ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಅದನ್ನು ಕಂಡ ಅಮರಗೋಳದ ಯುವಕರು ಸೇರಿಕೊಂಡು ಇಂದು ಇಡೀ ಬಾವಿಯನ್ನು ಸ್ವಚ್ಛಗೊಳಿಸಿ, ತಗ್ಗು ಬಿದ್ದಲ್ಲಿ ಕಾಂಕ್ರೀಟ್ ಹಾಕಿ ಸುಂದರಗೊಳಿಸಿದ್ದಾರೆ.
ಹೌದು... ಅಮರಗೋಳ ಗ್ರಾಮದ ಚವಡಿ ಓಣಿಯಲ್ಲಿರುವ ತುಂಬಾ ಹಳೆಯದಾದ ಬಾವಿಯ ಸುತ್ತಮುತ್ತ ಕಸ ತುಂಬಿಕೊಂಡಿತ್ತು. ಅಷ್ಟೇ ಅಲ್ದೆ ಬಹಳ ನೀರು ನಿಂತು ತಗ್ಗು ಬಿದ್ದು ಹಾಳಾಗುತ್ತಿತ್ತು. ಅದನ್ನು ಕಂಡ ಅಮರಗೋಳ ಗ್ರಾಮದ ಬಸವೇಶ್ವರ ಯುವಕ ಮಂಡಳದ ಅಧ್ಯಕ್ಷ ಚೇತನ ಶಿಗೀಹಳ್ಳಿ ಹಾಗೂ ಸಂತೋಷ್ ಹೊಸಮಠ ಅವರು ತಮ್ಮ ಸ್ನೇಹಿತರ ತಂಡದೊಂದಿಗೆ ಕಸ ತೆಗೆದು ಸ್ವಚ್ಛಗೊಳಿಸಿ, ತಗ್ಗು ಜಾಗದಲ್ಲಿ ಕಾಂಕ್ರೀಟ್ ಹಾಕಿ ಬಾವಿಯನ್ನು ಬಹಳ ಸುಂದರಗೊಳಿಸಿದ್ದಾರೆ.
ಈ ಮಹತ್ತರ ಕಾರ್ಯದಲ್ಲಿ ನಿಂಗಪ್ಪ ಪಾಗದ, ರಫೀಕ್ ದೊಡ್ಡಮನಿ, ಬಸಯ್ಯ ಹಿರೇಮಠ, ಪ್ರಶಾಂತ ಹಳವೂರ, ಮಂಜು ಪಾಗದ, ಬಸವರಾಜ ಚಿನಗಿ, ಚಂದ್ರು ಬೆಟಗೇರಿ, ಸುರೇಶ್ ಶಾನವಾಡ ಸೇರಿದಂತೆ ಹಲವು ಯುವಕರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.
Kshetra Samachara
29/06/2025 10:33 pm