ಕುಂದಗೋಳ : ಪರಿಶಿಷ್ಟ ಜಾತಿ ಓಣಿಯ ಮುಂದಿನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ಕೇಳಿ ಬಂದಿದೆ.
ಹೌದು ! ಕುಂದಗೋಳ ತಾಲೂಕಿನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಗುಡೇನಕಟ್ಟಿ ನಾಗರಹಳ್ಳಿ ಸಂಪರ್ಕದ ರಸ್ತೆ ಗುಡೇನಕಟ್ಟಿ ಗ್ರಾಮದ ಎಸ್.ಸಿ ಕಾಲೋನಿ ಬಳಿ ತಗ್ಗು ಗುಂಡಿ ಬಿದ್ದು ಕಲುಷಿತ ನೀರು ತುಂಬಿದೆ.
ಈ ರಸ್ತೆ ಅವ್ಯವಸ್ಥೆ ಗಮನಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಡಿ ಸುರಿದು ಹೋಗಿದ್ದಾರೆ ವಿನಃ ಪರ್ಯಾಯ ಅಭಿವೃದ್ಧಿಗೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ಅವ್ಯವಸ್ಥೆ ಬಗ್ಗೆ ಏನಂದ್ರು ಕೇಳಿ.
ಶಾಲಾ ವಿದ್ಯಾರ್ಥಿಗಳು, ವಯೋವೃದ್ಧರು ಓಡಾಡುವ ಎಸ್.ಸಿ ಓಣಿಯ ಮುಖ್ಯ ರಸ್ತೆಗೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
28/06/2025 05:04 pm