", "articleSection": "Politics,Infrastructure,Science and Technology,Government,News", "image": { "@type": "ImageObject", "url": "https://prod.cdn.publicnext.com/s3fs-public/421698-1750329941-Youtube-HD.02_16_36_02.Still2370.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಹೀಗೆ ಪ್ರೊಜೆಕ್ಟರ್ನಲ್ಲಿ ಪಳಪಳನೆ ಹೊಳೆಯುವ ಬಸ್ಗಳು ಓಡಾಡುತ್ತಿರುವ ಈ ದೃಶ್ಯ ಯುರೋಪ ರಾಷ್ಟ್ರಗಳದ್ದು, ಯುರೋಪ ರಾಷ್ಟ್ರಗಳಲ್ಲಿ ಮೆ...Read more" } ", "keywords": "Dharwad LRT buses, LRT buses replacing Chigari, Chigari bus alternative Dharwad, new buses in Dharwad, LRT bus service Dharwad, Dharwad public transport update, Chigari bus service changes, LRT bus introduction Dharwad, Dharwad transport news, Chigari bus replacement", "url": "https://dashboard.publicnext.com/node" }
ಧಾರವಾಡ: ಹೀಗೆ ಪ್ರೊಜೆಕ್ಟರ್ನಲ್ಲಿ ಪಳಪಳನೆ ಹೊಳೆಯುವ ಬಸ್ಗಳು ಓಡಾಡುತ್ತಿರುವ ಈ ದೃಶ್ಯ ಯುರೋಪ ರಾಷ್ಟ್ರಗಳದ್ದು, ಯುರೋಪ ರಾಷ್ಟ್ರಗಳಲ್ಲಿ ಮೆಟ್ರೊ ಮಾದರಿಯಲ್ಲಿ ಚಾಲ್ತಿಯಲ್ಲಿರೋ ಈ ಎಲೆಕ್ಟ್ರಿಕ್ ಬಸ್, ಈಗ ನಮ್ಮ ದೇಶದಲ್ಲಿಯೇ ಮೊದಲ ಬಾರಿಗೆ ಧಾರವಾಡ ಮತ್ತು ಹುಬ್ಬಳ್ಳಿ ಅವಳಿ ನಗರದ ಮಧ್ಯೆ ಬರ್ತಾ ಇವೆ.
ಹೌದು! ಈ ಹಿಂದೆ ವಿಶ್ವ ಬ್ಯಾಂಕ್ ಸಾಲದ ನೆರವಿನಿಂದ ಬಿಆರ್ಟಿಎಸ್ ಎಂಬ ಚಿಗರಿ ಬಸ್ ಯೋಜನೆ ಜಾರಿಗೆ ತರಲಾಗಿದೆ.
ಇದಕ್ಕಾಗಿಯೇ ಪ್ರತ್ಯೇಕ ಕಾರಿಡಾರ್ ಇದ್ದು, ಮಧ್ಯೆದಲ್ಲಿ ಚಿಗರಿ ಬಸ್ ಓಡಾಡಿದ್ರೆ ಸುತ್ತಮುತ್ತ ಉಳಿದ ವಾಹನಗಳು ಓಡಾಡಬೇಕು. ಆದರೆ ಇದರಿಂದ ಆಗುತ್ತಿರುವ ತೊಂದರೆಗಳಿಂದ ಹೋರಾಟಗಳು ಶುರುವಾಗಿದ್ದವು. ಹೀಗಾಗಿ ಇದೇ ಕಾರಿಡಾರನಲ್ಲಿ ಈಗ ಯುರೋಪಿಯನ್ ರಾಷ್ಟ್ರಗಳಲ್ಲಿರುವಂತೆ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಎಲ್ಆರ್ಟಿ ಬಸ್ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಏಕಕಾಲಕ್ಕೆ 250 ಜನ ಪ್ರಯಾಣಿಸಬಹುದಾದ ಈ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಕುರಿತು ಈಗಾಗಲೇ ಹೆಸ್ ಎನ್ನುವ ಸಂಸ್ಥೆ ಮುಂದೆ ಬಂದಿದ್ದು, ಇತ್ತೀಚೆಗೆ ಸಿಎಂ ಜೊತೆಗೆ ಒಡಂಬಡಿಕೆಗೆ ಸಹಿ ಸಹ ಹಾಕಿತ್ತು. ಈಗ ಡಿಪಿಆರ್ ಪೂರ್ವ ತಯಾರಿಯ ನಿಮಿತ್ತ ಧಾರವಾಡದಲ್ಲಿ ಜನಪ್ರತಿನಿಧಿಗಳು ಹಾಗೂ ಜನರೊಂದಿಗೆ ಸಮಾಲೋಚನೆ ಸಹ ನಡೆಸಿದೆ. ಜನರಿಂದ ಬಂದಿರೋ ಮಾಹಿತಿಯನ್ನು ಆಧರಿಸಿ ಡಿಪಿಆರ್ ಸಿದ್ಧಪಡಿಸಿ ಸರ್ಕಾರದ ಮುಂದೆ ಸಂಸ್ಥೆ ಪ್ರಪೋಜಲ್ ಇಡಲಿದೆ.
ಅದರಲ್ಲಿಯೂ ಅವಳಿ ನಗರದ ಮಧ್ಯೆ 14 ಕಿಮೀ ಎಲಿವೆಟೆಡ್ ಮೇಲೆ ಈ ಎಲೆಕ್ಟ್ರಿಕ್ ಬಸ್ಗಳು ಓಡಲಿದ್ದು, ಇದೊಂದು ರೀತಿಯಲ್ಲಿ ಮೆಟ್ರೊ ಮಾದರಿಯ ಅನುಭವ ಕೊಡಲಿದೆ. ಇದರಿಂದ ಅವಳಿ ನಗರದಲ್ಲಿ ಟ್ರಾಫಿಕ್ ದಟ್ಟಣೆಯೂ ಆಗೋದಿಲ್ಲ ಅನ್ನೋ ಅಭಿಪ್ರಾಯಗಳಿದ್ದು, ವಿಸ್ತೃತವಾದ ವರದಿಯನ್ನು ಸಂಸ್ಥೆ ಶೀಘ್ರದಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಿದೆ.
ಇದು ಸಂಪೂರ್ಣ ವಿದ್ಯುತ್ ಚಾಲಿತ ಸಾರಿಗೆ ವ್ಯವಸ್ಥೆಯಾಗಿದ್ದು, ಎತ್ತರಿಸಿದ ರಸ್ತೆ ಹಾಗೂ ಸಾಮಾನ್ಯ ರಸ್ತೆಗಳ ಮೇಲೆ ಕೂಡ ವಾಹನಗಳು ಸಂಚರಿಸಬಹುದು. ಈ ವಾಹನಗಳಲ್ಲಿ ಒಮ್ಮೆ 250 ಜನ ಪ್ರಯಾಣಿಸಬಹುದು. ಇನ್ನು ಒಂದು ವರ್ಷದಿಂದ ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿರುವ ಸಂಸ್ಥೆ, ಈಗ ಡಿಪಿಆರ್ ಸಿದ್ಧತೆಗೆ ಮುಂದಾಗಿದೆ.
ಆದರೆ ಈಗಾಗಲೇ ಅವಳಿ ನಗರದ ಮಧ್ಯೆ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಬಿಆರ್ಟಿಎಸ್ ಇದೆ ಈ ಯೋಜನೆಯ ಸಾಧಕ ಬಾಧಕಗಳನ್ನು ಆಧರಿಸಿ, ಇಲ್ಲಿ ಆಗಿರೋ ನೂನ್ಯತೆಗಳು ಆಗದಂತೆ ಮುಂಜಾಗ್ರತೆ ವಹಿಸುವಂತೆ ಈ ಸಮಾಲೋಚನ ಸಭೆಯಲ್ಲಿ ಅಭಿಪ್ರಾಯಗಳು ಕೇಳಿ ಬಂದವು.
ಇನ್ನು ಈ ಯೋಜನೆ ತರುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮುತುರ್ವಜಿ ವಹಿಸಿದ್ದು ಖುದ್ದಯ ಈ ಬಸ್ ಸೇವೆ ಇರೋ ರಾಷ್ಟ್ರಗಳಿಗೆ ತೆರಳಿ, ಯೋಜನೆ ಹೇಗೆಲ್ಲ ಇದೆ ಅನ್ನೋದನ್ನು ನೋಡಿಕೊಂಡು ಬಂದಿದ್ದಾರೆ.
ಒಟ್ಟಾರೆಯಾಗಿ ಬಿಆರ್ಟಿಎಸ್ ಚಿಗರಿ ಬಸ್ನಿಂದ ಅವಳಿ ನಗರದ ಸಾರ್ವಜನಿಕರಿಗೆ ಕಿರಿಕಿರಿ ಆಗಿದ್ದೇ ಹೆಚ್ಚು. ಹೀಗಾಗಿ ಈ ಹೊಸ ಎಲ್ಆರ್ಟಿ ಬಸ್ ಸೇವೆಯಿಂದ ಈಗ ಆಗುತ್ತಿರುವ ಕಿರಿಕಿರಿಗೆ ಮುಕ್ತಿ ಸಿಕ್ರೆ ಸಾಕು, ಅದು ಬಿಟ್ಟು ಮತ್ತೊಂದು ಕಿರಿಕಿರಿ ಎದುರಾಗದಿರಲಿ ಅನ್ನೋದು ಅವಳಿ ನಗರದ ಜನತೆಯ ಆಗ್ರಹವಾಗಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
19/06/2025 04:15 pm